
ಚೆನ್ನೈ (ಡಿ.26): ರಜನಿಕಾಂತ್ ರಾಜಕೀಯ ಪ್ರವೇಶ ಖಚಿತವಾಗಿದೆ. ಹೊಸ ವರ್ಷಕ್ಕೆ ಸಿಹಿಸುದ್ದಿಯನ್ನು ನೀಡಲು ರೆಡಿಯಾಗಿದ್ದಾರೆ ತಲೈವಾ. ಈ ಬಗ್ಗೆ ಚೆನ್ನೈನ ರಾಘವೇಂದ್ರ ಹಾಲ್ನಲ್ಲಿ ರಜಿನಿಕಾಂತ್ ಅಭಿಮಾನಿಗಳ ಜೊತೆ ಇಂದು ಸಂವಾದ ನಡೆಸಿದ್ದಾರೆ.
ರಾಜಕೀಯಕ್ಕೆ ನಾನೇನು ಹೊಸಬನಲ್ಲ. ಡಿಸೆಂಬರ್ 31ಕ್ಕೆ ಅಂತಿಮ ನಿರ್ಧಾರ ತಿಳಿಸುತ್ತೇನೆ. ನನ್ನ ರಾಜಕೀಯ ಪ್ರವೇಶ, ವಿಷನ್ ಬಗ್ಗೆ ಅಂತಿಮ ನಿರ್ಧಾರ ತಿಳಿಸುವೆ ಎಂದು ಸೂಪರ್ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಯುದ್ಧಕ್ಕೆ ಇಳಿದರೆ ಜಯಿಸಬೇಕು. ನಾನು ಹೋರಾಟ ಮಾಡಿಯೇ ಮುಂದೆ ಬಂದವನು. ಹೋರಾಟ ಮಾಡಿದ್ರೆ ಗೆದ್ದೇ ಗೆಲ್ಲುತ್ತೇವೆ. 1990ರಿಂದಲೂ ರಾಜಕೀಯದಲ್ಲಿ ಇದ್ದೇನೆ. ತೋಳ್ಬಲ ಒಂದೇ ಇದ್ದರೆ ಸಾಲದು, ಬುದ್ಧಿಬಲವೂ ಬೇಕು ಎಂದಿದ್ದಾರೆ.
ಅಭಿಮಾನಿಗಳನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಸಭೆಗೆ ಆಗಮಿಸಿದ ಎಲ್ಲಾ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.