
ಬೆಂಗಳೂರು(ಮಾ. 05): ಬಹಳ ದಿನಗಳಿಂದ ಹೊಗೆಯಾಡುತ್ತಿದ್ದ ಸುದ್ದಿ ಮತ್ತು ಆತಂಕವೊಂದು ನಿಜವಾದಂತಿದೆ. ಸ್ಯಾಂಡಲ್ವುಡ್'ನ ಕುಚುಕು ಸ್ನೇಹಿತರೆಂದೇ ಕರೆಯಲ್ಪಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಮುರಿದುಬಿದ್ದಿದೆ. ಹಾಗಂತ, ದರ್ಶನ್ ತೂಗುದೀಪ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದೆ. ದರ್ಶನ್ ತೂಗುದೀಪ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ಬಾಂಬ್ ಸಿಡಿಸಲಾಗಿದೆ.
"ನಾನು ಮತ್ತು ಸುದೀಪ್ ಸ್ನೇಹಿತರಾಗಿ ಉಳಿದಿಲ್ಲ. ನಾವಿಬ್ಬರು ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುತ್ತಿರುವ ನಟರಷ್ಟೇ. ಮತ್ಯಾವುದೇ ಊಹಾಪೋಹಗಳು ಬೇಡ. ಇಲ್ಲಿದೆ ಇದು ಸಾಕು" ಎಂದು ದರ್ಶನ್ ತೂಗುದೀಪರ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.
ದರ್ಶನ್ ಮತ್ತು ಸುದೀಪ್ ಮಧ್ಯೆ ಈಗ್ಗೆ ಹಲವು ದಿನಗಳಿಂದ ಶೀತಲ ಸಮರವಿತ್ತೆಂಬ ಮಾತು ಸ್ಯಾಂಡಲ್ವುಡ್'ನಲ್ಲಿ ಹರಿದಾಡುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.