
ಬೆಂಗಳೂರು(ಜೂ.8): ನಗರ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಾಕುನಾಯಿಗಳನ್ನು ಹೊಂದಿದ್ದರೆ ಒಂದು ನಾಯಿಯನ್ನು ವಶಕ್ಕೆ ಪಡದುಕೊಳ್ಳಲಾಗುವುದು ಎಂಬ ಬಿಬಿಎಂಪಿ ನಿಯಮವನ್ನು ಸ್ಯಾಂಡಲ್ ವುಡ್ ನಟ ಡ್ಯಾನಿಶ್ ಸೇಠ್ ವಿರೋಧಿಸಿದ್ದಾರೆ. ಒಂದಕ್ಕಿಂತ ಹೆಚ್ಚು ನಾಯಿಗಳಿದ್ದರೆ ಮತ್ತೊಂದನ್ನು ಎಲ್ಲಿ ಬಚ್ಚಿಡುವುದು ಎಂದು ಅವರು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಇಂತಹ ನಿರ್ಣಯಗಳನ್ನು ಏಕೆ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ ಎಂದಿರುವ ಡ್ಯಾನಿಶ್, ಇದರ ಬದಲು ಬೆಂಗಳೂರಿನ ಬೇರೆ ಸಮಸ್ಯೆಗಳತ್ತ ಬಿಬಿಎಂಪಿ ಗಮನಹರಿಸುವುದು ಒಳ್ಳೆಯದು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.
ಸಾಕುನಾಯಿಗಳ ಬೊಗಳುವ ಶಬ್ದಕ್ಕಿಂತ ಕೆಲವರ ಶಬ್ದ ಅಸಹನೀಯವಾಗಿದ್ದು, ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಬಗೆಹರಿಸಲು ನಾಗರಿಕರು ಮುಂದಾಗಬೇಕು ಎಂದು ಡ್ಯಾನಿಶ್ ಸಲಹೆ ನೀಡಿದ್ದಾರೆ. ಬಿಬಿಎಂಪಿಯ ಈ ನಿರ್ಧಾರ ಕೆಲವು ವಿಶಿಷ್ಟ ತಳಿಯ ನಾಯಿಗಳಿಗೆ ಅನ್ವಯವಾಗುವುದಿಲ್ಲ ಎಂಬ ನಿಯಮವನ್ನೂ ಪ್ರಶ್ನಿಸಿರುವ ಡ್ಯಾನಿಶ್, ಹಾಗಾದರೆ ಈ ತಳಿಯ ನಾಯಿಗಳನ್ನು ಹೊರತುಪಡಿಸಿ ಉಳಿದವುಗಳನ್ನು ನಾವೇನು ಫ್ಯಾನ್ಸಿ ಡ್ರೆಸ್ ಹಾಕಿಸಿ ಬಚ್ಚಿಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.