ಸರ್ಕಾರದ ಕ್ರಮಕ್ಕೆ ದಲಿತರು, ರೈತರು, ಬಡಜನರಿಂದ ಸ್ವಾಗತ: ಮೋದಿ

By Suvarna Web DeskFirst Published Nov 20, 2016, 2:39 PM IST
Highlights

ನೋಟು ನಿಷೇಧದಿಂದ ಕಷ್ಟ ಅನುಭವಿಸುತ್ತಿದ್ದರೂ ಕೂಡ ಜನರು ಕಪ್ಪು ಹಣದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ: ಮೋದಿ

ಲಖನೌ (ನ.20): ಐನೂರು ಸಾವಿರ ನೋಟು ಬ್ಯಾನ್ ಮಾಡಿರುವ ನನ್ನ ನಿರ್ಧಾರವನ್ನು  ದಲಿತರು, ರೈತರು, ಬಡ ಜನರು ಸ್ವಾಗತಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದ ಆಗ್ರಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನೋಟ್ ನಿಷೇಧ ಬಗ್ಗೆ ವಿವರಣೆ ನೀಡಿದ್ದಾರೆ.

ಸಾರ್ವಜನಿಕರಲ್ಲಿ  50 ದಿನಗಳ ಕಾಲಾವಕಾಶ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಬಹಳ ಕಠಿಣ ಪರಿಸ್ಥಿತಿ ಎದುರಾಗಬಹುದು ಎಂದು ನಾನು ಮೊದಲೇ ತಿಳಿಸಿದ್ದೆ. ನೋಟು ನಿಷೇಧದಿಂದ ಕಷ್ಟ ಅನುಭವಿಸುತ್ತಿದ್ದರೂ ಕೂಡ ಜನರು ಕಪ್ಪು ಹಣದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಈ ದೇಶದ ದಲಿತರು, ರೈತರು, ಬಡ ಜನರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.

click me!