
ಚೆನ್ನೈ[ಆ.04]: ತಮಿಳು ನಾಡಿನ ತಿರುಚಿಯ 13ನೇ ಶತಮಾನದ ಅಮ್ಮನ್ ದೇಗುಲವನ್ನು ಅಲ್ಲಿನ ಅರ್ಚಕ ಕೆ.ಶಿವಶಂಕರನ್ ಕೆಲ ದಿನಗಳ ಹಿಂದೆ ಪ್ರಗತಿಪರರು ಹಾಗೂ ಯುವಕರ ಸಹಾಯದಿಂದ ಜೀರ್ಣೋದ್ಧಾರಗೊಳಿಸಿದ್ದರು. ಆದರೆ ಇವರ ಜಾತಿಯನ್ನು ತಿಳಿದುಕೊಂಡ ಕೆಲ ಗ್ರಾಮಸ್ಥರು ದೇಗುಲದಿಂದ ಪದಚ್ಯುತಗೊಳಿಸಲು ಆಗ್ರಹಿಸುತ್ತಿದ್ದಾರಂತೆ.
2010ರಲ್ಲಿ ದಿನಕ್ಕೆ 30ರೂ ವೇತನದಂತೆ ತಿರುಚಿ ಜಿಲ್ಲೆಯ ಕನ್ಯಾಮಾಣಿಕಮ್ ಗ್ರಾಮದ ಅರ್ಥಶಾಸ್ತ್ರ ಪದವೀಧರ 34 ವಯಸ್ಸಿನ ಕೆ.ಶಿವಶಂಕರನ್ ಎಂಬುವವರನ್ನು ಧಾರ್ಮಿಕ ಹಾಗೂ ದತ್ತಿ ಮುಜರಾಯಿ ಇಲಾಖೆ ತಾತ್ಕಾಲಿಕ ಅರ್ಚಕನಾಗಿ ನೇಮಿಸಿತ್ತು. ಇದಕ್ಕೂ ಮೊದಲು ಇಲಾಖೆ ಹಮ್ಮಿಕೊಳ್ಳುವ ಪರೀಕ್ಷೆಯನ್ನು ಇವರು ಉತ್ತೀರ್ಣಗೊಳಿಸಿದ್ದರು.
ಈ ಪ್ರದೇಶದಲ್ಲಿ ನಾಯ್ಡು, ವೆಲ್ಲಾಲಾರ್, ಮುತ್ತುರಾಯರ್ ಹಾಗೂ ರೆಡ್ಡಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಸಮುದಾಯದ ವಿದ್ಯಾವಂತರು ಶಿವಶಂಕರನ್ ಅವರಿಗೆ ಬೆಂಬಲ ಸೂಚಿಸಿದರೆ ಸಂಪ್ರದಾಯಸ್ಥ ಮನೋಭಾವವುಳ್ಳವರು ಅರ್ಚಕ ಹುದ್ದೆಯಿಂದ ಪದಚ್ಯುತಿಗೊಳಿಸಲು ಆಗ್ರಹಿಸುತ್ತಿದ್ದಾರೆ. 4 ದಶಕಗಳಿಂದ ಗ್ರಾಮದ 2 ಗುಂಪುಗಳ ಘರ್ಷಣೆಯಿಂದ ಮುಚ್ಚಲಾಗಿದ್ದ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದಷ್ಟೆ ತೆರೆಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.