ಡಿಕೆಶಿ ಸಹಭಾಗಿತ್ವದ ಚಿರಸ್ಥಾಯಿ ಸೋಲಾರ್ ಘಟಕಕ್ಕೆ ಬೀಗ

Published : Oct 20, 2017, 03:54 PM ISTUpdated : Apr 11, 2018, 12:53 PM IST
ಡಿಕೆಶಿ ಸಹಭಾಗಿತ್ವದ ಚಿರಸ್ಥಾಯಿ ಸೋಲಾರ್ ಘಟಕಕ್ಕೆ ಬೀಗ

ಸಾರಾಂಶ

ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.

ಕೊಪ್ಪಳ: ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.

ನಿರ್ಮಾಣ ಹಂತದಲ್ಲಿಯೇ ವಿವಾದಕ್ಕೆ ಸಿಲುಕಿರುವ ಈ ಘಟಕಕ್ಕೆ ಪ್ರಗತಿಪರ ಸಂಘಟನೆಗಳು ಬೀಗ ಜಡಿದಿದ್ದರಿಂದ ಕಾಮಗಾರಿಯನ್ನು ಕಳೆದೆರಡು ದಿನಗಳಿಂದ ಸ್ಥಗಿತ ಮಾಡಲಾಗಿದೆ. ಸುಮಾರು 28 ದಲಿತ ಕುಟುಂಬಗಳು ಹಲವು ವರ್ಷದಿಂದ ಉಳುಮೆ ಮಾಡುತ್ತಿರುವ ಈ ಭೂಮಿ ಕುರಿತ ವಿವಾದ ಎಸ್‌ಸಿ, ಎಸ್‌ಟಿ ಆಯೋಗದ ನ್ಯಾಯಾಲಯ ಮೆಟ್ಟಿಲೇರಿತ್ತು.

ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಕೋರ್ಟ್ ಆದೇಶ ಮಾಡಿದ್ದರೂ ಜಿಲ್ಲಾಡಳಿತ ನುಣಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪ್ಲಾಂಟ್‌ಗೆ ಬೀಗ ಜಡಿದಿದ್ದಾರೆ. ಈ ದಲಿತ ಕುಟುಂಬಗಳನ್ನು ಒಕ್ಕಲಬ್ಬಿಸಿ ಇಲ್ಲಿ ಚಿರಸ್ಥಾಯಿ ಕಂಪನಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಈ ಭೂಮಿ ನಮ್ಮದೆಂದು ಚಿರಸ್ಥಾಯಿ ಕಂಪನಿಗೆ ಭೂಮಿಯನ್ನು ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಂಡ ಹಾಕಿ ಲೈಂಗಿಕ ದೌರ್ಜನ್ಯ ಕೇಸ್ ಮುಚ್ಚಿ ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು! ಏನಿದು ಪ್ರಕರಣ?
ಗ್ರೇಟರ್ ಬೆಂಗಳೂರು: ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ತಡೆ, ಬಡರೋಗಿಗಳ ನೆರವಿಗೆ ಕತ್ತರಿ?