
ಉಡುಪಿ : ಹಲವೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಿಕುನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಯಲ್ಲಿಯೂ ತಟ್ಟಿದೆ. ಉಡುಪಿ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ ಹೆಚ್ಚಿದೆ.
ಕಾಪು, ಪಡುಕೆರೆ, ಮಲ್ಪೆ ಬೀಚ್ ಗಳಲ್ಲಿ ಅಲೆಗಳ ತೀವ್ರತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಮೀನುಗಾರಿಕೆಗೆ ತೆರಳದೆ ಮೀನುಗಾರರು ತಮ್ಮ ಬೋಟ್ ಗಳೊಂದಿಗೆ ಹಿಂತಿರುಗಿದ್ದಾರೆ.
ಸುಮಾರು 500 ಮೀಟರ್ ದೂರದಿಂದಲೇ ಅಲೆಗಳು ಏರಿ ಬರುತ್ತಿದ್ದು, ಭಾರೀ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣವಿದೆ.
ಈಗಾಗಲೇ ಯೆಮನ್ ದೇಶಕ್ಕೆ ಮಿಕುನು ಅಪ್ಪಳಿಸಿದ್ದು, ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.