
ರಾಜ್ಯದಲ್ಲಿ ರಿಪಬ್ಲಿಕ್ ಆಫ್ ಲಿಕ್ಕರ್ ಒಂದು ಸ್ಥಾಪನೆಯಾಗಿದೆ. ಅಲ್ಲಿ ನೆಲದ ಕಾನೂನಿಗೆ ಬೆಲೆಯೇ ಇಲ್ಲ. ಅಬಕಾರಿ ಇಲಾಖೆಗೆ ಕೇರೇ ಅನ್ನಲ್ಲ. ಇಂಥಾ ಆತಂಕಕಾರಿ ಬೆಳವಣಿಗೆಯೊಂದು ರಾಜ್ಯದಲ್ಲಿ ನಡಿಯುತಿರೋದು ನಮ್ಮ ಕವರ್ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ದೇಶಕ್ಕೊಂದು ಕಾನೂನಾದ್ರೆ ರಾಜ್ಯದ ಲಿಕ್ಕರ್ ದಂಧೆಯವರದ್ದೇ ಒಂದು ಕಾನೂನು. ರಾಜ್ಯದಲ್ಲಿ ಹತ್ತು ಸಾವಿರ ವೈನ್ಸ್, ಬಾರ್ಸ್, ಕ್ಲಬ್ಸ್ ನಮ್ಮ ರಾಜ್ಯದಲ್ಲಿ ಲೈಸೆನ್ಸ್ ಪಡೆದು ಮದ್ಯ ಮಾರುತ್ತಿವೆ. ಆದ್ರೆ ಹೆಚ್ಚಿನ ಮದ್ಯ ಮಾರಾಟಗಾರರು ಮಾತ್ರ ನೆಲದ ಕಾನೂನು ಮೀರಿ ಬೆಳೆದಿದ್ದಾರೆ. ಅದು ಹೇಗೆ ಅನ್ನೋದು ನಾವು ಬೆಂಗಳೂರಿನಿಂದ ಬೀದರ್'ವರೆಗೆ ಮಂಗಳೂರಿನಿಂದ ಕೋಲಾರದವರೆಗೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಮದ್ಯದಂಗಡಿಗಳಲ್ಲಿ ಎಂ.ಆರ್.ಪಿಗೆ ಬೆಲೆಯೇ ಇಲ್ಲ. ಇದು ಬರೀ ಹಗಲು ದರೋಡೆಯಲ್ಲ. ಗ್ರಾಹಕರ ಮೇಲಾಗುತ್ತಿರೋ ದೌರ್ಜನ್ಯ. ರಾಜಾರೋಷವಾಗಿ ಕಪ್ಪು ಹಣ ಸಂಗ್ರಹಿಸೋ ದೇಶ ದ್ರೋಹದ ಕೆಲಸ. ಯಾಕಂದ್ರೆ ಮದ್ಯ ಮಾರಾಟಗಾರರು ಮಂತ್ರಿಗಳಿಂದ ಹಿಡಿದು ಆಯುಕ್ತರವರೆಗೆ ಎಲ್ಲರಿಗೂ ಲಂಚ ತಿನ್ನಿಸುತ್ತಿದ್ದಾರಂತೆ. ಹೀಗೆ ಈ ವಿಷ ಕುಡಿಸೋ ವ್ಯಾಪಾರ, ನೆಲ ಕಾನೂನು ಮೀರಿ ವರ್ತಿಸುತ್ತಿದ್ದರೂ ನಮ್ಮ ಬಲಹೀನ ಸರ್ಕಾರ ಕೈಕಟ್ಟಿ ಕುಳಿತಿದೆ. ಮದ್ಯ ಮಾರಾಟಗಾರರು ಕೊಡೋ 60, 90ಗೆ ನಾಲಿಗೆ ಚಾಚಿ ನೈತಿಕತೆಯನ್ನೇ ಕಳೆದುಕೊಂಡು ರಿಪಬ್ಲಿಕ್ ಆಫ್ ಲಿಕ್ಕರ್ಗೆ ಸಲಾಂ ಹೊಡೀತಿದೆ.
ವರದಿ: ರಂಜಿತ್ ಹಾಗೂ ವಿಜಯಲಕ್ಷ್ಮಿ ಶಿಬರೂರು ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.