ಸಂವಿಧಾನ ಇಲ್ಲದಿದ್ದರೆ ಹೆಗಡೆ ಸಚಿವನಾಗುತ್ತಿರಲಿಲ್ಲ – ಪುರೋಹಿತನಾಗಿರುತ್ತಿದ್ದರು : ದ್ವಾರಕನಾಥ್

Published : Dec 30, 2017, 03:22 PM ISTUpdated : Apr 11, 2018, 01:01 PM IST
ಸಂವಿಧಾನ ಇಲ್ಲದಿದ್ದರೆ ಹೆಗಡೆ ಸಚಿವನಾಗುತ್ತಿರಲಿಲ್ಲ – ಪುರೋಹಿತನಾಗಿರುತ್ತಿದ್ದರು : ದ್ವಾರಕನಾಥ್

ಸಾರಾಂಶ

ಎಂದಾದರೂ ಸಂವಿಧಾನ ಓದಿದ್ದಾನಾ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರ (ಡಿ.30): ಚಾಮರಾಜನಗರದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಕೋರೆಗಾಂವ್ ವಿಜಯೋತ್ಸವ -200 ವರ್ಷಗಳು...ಮುಂದೇನು..? ಕುರಿತು ವಿಚಾರ ಸಂಕಿರಣ ನಡೆದಿದ್ದು, ಈ ವೇಳೆ ಮಾತನಾಡಿದ ದ್ವಾರಕನಾಥ್ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಚಾರ ಸಂಕಿರಣ ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್  ಸಂವಿಧಾನದ ಬದಲಾವಣೆ ಬಗ್ಗೆ ಕ್ರಿಮಿಕೀಟಗಳು ಮಾತನಾಡುತ್ತಿವೆ. ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಓರ್ವ ಮೂರ್ಖ, ಐದಾರು ಬಾರಿ ಸಂಸದನಾಗಿದ್ದಾನೆ ಆತನಿಗೆ ಸಂವಿಧಾನ ಗೊತ್ತ .? ಎಂದಾದರೂ ಸಂವಿಧಾನ ಓದಿದ್ದಾನಾ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಪುಸ್ತಕ ಮುಟ್ಟುವುದಕ್ಕು ಆತ ಅಸ್ಪೃಶ್ಯತೆ ಆಚರಿಸುತ್ತಿದ್ದಾನೆ. ಸಂವಿಧಾನ ಇರದಿದ್ದರೆ ಆತ ಹೇಗೆ ಕೇಂದ್ರ ಸಚಿವ ಆಗುತ್ತಿದ್ದ,  ಸಂವಿಧಾನದಿಂದಲೇ ಕೇಂದ್ರ ಸಚಿವನಾಗಿದ್ದಾನೆ. ಇಲ್ಲದಿದ್ದರೆ ಕಾರವಾರದಲ್ಲಿ ಪೌರೋಹಿತ್ಯ ಮಾಡಿಕೊಂಡಿರುತ್ತಿದ್ದ. ಅನಂತಕುಮಾರ್ ಹೆಗ್ಗಡೆ ಅಲ್ಲ, ಆತ ಹೆಗ್ಗಣ. ಆತನ ಹೆಸರು ಹೇಳುವುದಕ್ಕೆ ನಾಚಿಕೆಯಾಗುತ್ತದೆ. ಅಂಬೇಡ್ಕರ್ ಸಂವಿಧಾನ ಬರೆದಿದ್ದು ಕೇವಲ ಎಸ್ ಸಿ, ಎಸ್ ಟಿ ಗೆ ಅಲ್ಲ, ಹಿಂದುಳಿದವರಿಗೂ ಸಂವಿಧಾನ ಬರೆದಿದ್ದಾರೆ. ಆದರೆ ಹಿಂದುಳಿದವರು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಡಾ.ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ