
ಸಂಗೀತ ಕೇಳಿದರೆ ಹಸು ಜಾಸ್ತಿ ಹಾಲು ಕೊಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಅದೇ ರೀತಿ ಹಸುಗಳು ದಷ್ಟಪುಷ್ಠವಾಗಿ ಬೆಳೆಯಲು ಕುರಾನಿನ ಪ್ರವಚನ ಕೇಳಿಸಲು ಮಲೇಷ್ಯಾ ಮುಂದಾಗಿದೆ.
ಇದರಿಂದ ಹಸುಗಳು ಹೆಚ್ಚಿನ ಮಾಂಸವನ್ನು ನೀಡುತ್ತದೆ ಎಂಬ ನಂಬಿಕೆ. ಗ್ರಾಮೀಣ ಭಾಗದ ರೈತರು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಿದ್ದಾರಂತೆ. ಕುರಾನ್ ಪಠಣದಿಂದ ಜನರ ಮನಸ್ಸು ಶಾಂತವಾಗಿರುತ್ತದೆ.
ಅದೇ ರೀತಿ ಪ್ರಾಣಿಗಳ ಮನಸ್ಸು ಕೂಡ ಶಾಂತವಾಗಿ ಇರಲಿದ್ದು, ದಷ್ಟಪುಷ್ಠವಾಗಿ ಬೆಳೆದು ಹೆಚ್ಚಿನ ಮಾಂಸವನ್ನು ನೀಡಲಿದೆ ಎಂದು ಮಲೇಷ್ಯಾ ಕೃಷಿ ಸಚಿವ ಚೆ ಅಬ್ದುಲ್ಲಾ ಹೇಳಿದ್ದಾರೆ.
ಮಲೇಷ್ಯಾದಲ್ಲಿ ಇಸ್ಲಾಮಿಕ್ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಪಾಲಿಸದೇ ಇದ್ದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.