ತ್ರಿಪುರಾ: ಹೋದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮೆರೆದಿದ್ದ ಬಿಜೆಪಿಯಿಂದ ಸರಕಾರ ರಚನೆ

Published : Mar 03, 2018, 08:59 AM ISTUpdated : Apr 11, 2018, 12:59 PM IST
ತ್ರಿಪುರಾ: ಹೋದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮೆರೆದಿದ್ದ ಬಿಜೆಪಿಯಿಂದ ಸರಕಾರ ರಚನೆ

ಸಾರಾಂಶ

ಬಿಜೆಪಿಯ ವಿಜಯ ಸರಣಿ ಈಶಾನ್ಯ ರಾಜ್ಯಗಳಲ್ಲೂ ಮುಂದುವರಿಯಲಿದೆಯೇ ಎಂಬ ಕುತೂಹಲಕ್ಕೆ ಶನಿವಾರ ತೆರೆಬೀಳಲಿದೆ. ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ಚುನಾವಣಾ ಫಲಿತಾಂಶ ಶನಿವಾರ ಹೊರಬೀಳಲಿದೆ.

ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಮತ ಎಣಿಕೆ ಮುಂದುವರಿದಿದ್ದು, ಬಿಜೆಪಿ ತನ್ನ ಪ್ರಭಾವವನ್ನು ಈ ರಾಜ್ಯಗಳಲ್ಲಿ ಬೀರುವಲ್ಲಿಯೂ ಯಶಸ್ವಿಯಾಗಿದೆ. ಈಶಾನ್ಯ ಭಾಗದಲ್ಲಿಯೂ ಪಕ್ಷ ತನ್ನ ಛಾಪು ಮೂಡಿಸಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಪ್ರತಿಜ್ಞೆಗೆ ಅಪಾರ ಜಯ ಸಿಕ್ಕಂತಾಗಿದೆ.

ಕಳೆದ ಚುನಾವಣೆಯಲ್ಲಿ ಮೇಘಾಲಯ ಮತ್ತು ತ್ರಿಪುರಾದಲ್ಲಿ ಶೂನ್ಯ ಸಾಧನೆ ತೋರಿದ್ದ ಕೇಸರಿ ಪಕ್ಷ, ಈ ಬಾರಿ ಭಾರಿ ಕೆಲವು ಸಾಧಿಸಿದೆ. ಅದರಲ್ಲಿಯೂ ತ್ರಿಪುರಾದಲ್ಲಿ 25 ವರ್ಷಗಳಿಂದ ಇದ್ದ, ಮಾಣಿಕ್ ಸರಕಾರ್ ನೇತೃತ್ವದ ಸಿಪಿಎಂ ಸರಕಾರವನ್ನು ಕಿತ್ತೊಗೆಯುವಲ್ಲಿ ಮೋದಿ-ಶಾ ಜೋಡಿ ಯಶಸ್ವಿಯಾಗಿದ್ದು. ಈ ಮೂರು ರಾಜ್ಯಗಳಲ್ಲಿ ಸರಕಾರ ರಚಿಸು ಬೇಕಾಗಿದ್ದು 31 ಸೀಟುಗಳು. ತ್ರಿಪುರಾದಲ್ಲಿ ಈ ಹೊತ್ತಿನ ಮಾಹಿತಿ ಪ್ರಕಾರ ಬಿಜೆಪಿ, 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುವುದು ಖಾತ್ರಿಯಾಗಿದೆ. ಈ ರಾಜ್ಯದಲ್ಲಿ 10 ಸ್ಥಾನಗಳನ್ನು ಕಳೆದುಕೊಂಡ ಕಾಂಗ್ರೆಸ್, ಶೂನ್ಯ ಸಾಧನೆ ತೋರಿದರೆ, 48 ಸ್ಥಾನ ಗಳಿಸಿದ್ದ ಸಿಪಿಎಂ ಇದೀಗ 18 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುತ್ತಿದೆ.

ಮೇಘಾಲಯದಲ್ಲಿ ಕಾಂಗ್ರೆಸ್ ತುಸು ಮುನ್ನಡೆ ಸಾಧಿಸುತ್ತಿರುವುದು ಹೌದಾದರೂ, ಕಳೆದ ಬಾರಿಗೆ ಹೋಲಿಸಿದರೆ ಸ್ಥಾನಗಳನ್ನು ಕಳೆದು ಕೊಳ್ಳುವ ಸೂಚನೆ ಕಾಣಿಸುತ್ತಿದೆ.

ನಾಗಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ತೋರಿದ್ದು, ಎನ್‌ಡಿಎಫ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ.

ಇತ್ತೀಚಿನ ಮಾಹಿತಿಯಂತೆ, ಪಕ್ಷಗಳ ಬಲಾಬಲ ಹೀಗಿದೆ...

ಮೇಘಾಲಯ
ಕಾಂಗ್ರೆಸ್- 22 (-6)
ಯುಡಿಪಿ- 8 (-1)
ಬಿಜೆಪಿ- 4 (4)
ಎನ್‌ಪಿಪಿ- 16 (14)
ಇತರೆ- 9 (-11)

ನಾಗಲ್ಯಾಂಡ್
ಎನ್‌ಪಿಎಫ್- 23 (-13)
ಬಿಜೆಪಿ -31 (30)
ಕಾಂಗ್ರೆಸ್- 0 (-9)
ಇತರೆ - 6 (-8)

ತ್ರಿಪುರಾ
ಸಿಪಿಎಂ- 19 (-29)
ಕಾಂಗ್ರೆಸ್- 0 (-10)
ಬಿಜೆಪಿ - 40 (+40)
ಇತರೆ- 0 (-1)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌