
ಲಕ್ನೋ[ಮೇ.10]: ಮೇ ತಿಂಗಳು ಆರಂಭವಾಗುತ್ತಿದ್ದಂತೆಯೇ ವಾತಾವರಣದಲ್ಲಿ ಶಾಖ ಏರಿಕೆ ಕಂಡಿದೆ. ತಾಪಮಾನ ಹೆಚ್ಚುತ್ತಿದ್ದಂತೆಯೇ ಮನೆಗಳಲ್ಲಿ ಫ್ಯಾನ್ ಹಾಗೂ ಕೂಲರ್ ಬಳಕೆಯೂ ಹೆಚ್ಚಲಾರಂಭಿಸಿದೆ. ಜನರು ಸೆಕೆ ತಡೆಯಲಾರದೆ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯೂ ತಲೆದೋರಿದೆ. ಆದರೆ ಯಾವತ್ತಾದರೂ ದೇವರಿಗೂ ಸೆಕೆಯಾಗಬಹುದೆಂದು ನೀವು ಅಂದುಕೊಂಡಿದ್ದೀರಾ? ಇದು ಕೊಂಚ ಅಚ್ಚರಿ ಮೂಡಿಸಿದರೂ ಇದು ನಂಬಲೇಬೇಕು.
ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ದೇವಸ್ಥಾನವೊಂದರಲ್ಲಿ ದೇವರು ಹಾಗೂ ಮೂರ್ತಿಗಳಿಗೂ ಸೆಕೆಯಾಗಲಾರಂಭಿಸಿದೆ. ಹೀಗಂತ ಅಲ್ಲಿನ ಅರ್ಚಕರೇ ಹೆಳಿದ್ದಾರೆ. ಇದೇ ಕಾರಣದಿಂದ ದೇವಸ್ಥಾನದಲ್ಲಿರುವ ಮೂರ್ತಿಗಳಿಗೆಲ್ಲಾ ಸೆಕೆಯಾಗದಂತೆ ಫ್ಯಾನ್ ಹಾಕಲಾಗಿದೆ. ಇಲ್ಲಿನ ಸಿದ್ಧಿ ವಿನಾಯಕ ಗಣೇಶ ಮಂದಿರದ ಅರ್ಚಕ ಸುರ್ಜೀತ್ ಕುಮಾರ್ ದುಬೆ ಪ್ರತಿಕ್ರಿಯಿಸುತ್ತಾ ದೇವರಿಗೂ ಸೆಕೆಯಾಗುತ್ತದೆ. ಅವರು ಕೂಡಾ ಮನುಷ್ಯರಂತೆಯೇ, ಹೀಗಾಗಿ ದೇವರಿಗೆ ಫ್ಯಾನ್ ಹಾಗೂ ಕೂಲರ್ ವ್ಯವಸ್ಥೆ ಮಾಡಿದ್ದೇವೆ. ಸೆಕೆಯಿಂದ ಕಾಪಾಡಲು ತೆಳು ಬಟ್ಟೆಗಳನ್ನು ಹೊದಿಸುತ್ತಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.