
ಬೆಳಗಾವಿ (ಡಿ.01): ಬೆಳಗಾವಿಯ ಕೆಐಡಿಬಿ ತಾತ್ಕಾಲಿಕ ಪೊಲೀಸ್ ವಸತಿ ಸಮುಚ್ಚಯಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ಈ ವೇಳೆ ಪೊಲೀಸ್ ಪೇದೆಯೊಬ್ಬರು, ತಮ್ಮ ಸಂಕಷ್ಟ ತೋಡಿಕೊಂಡು ಗಳಗಳನೆ ಅತ್ತರ ಘಟನೆ ನಡೆದಿದೆ.
2 ಸಾವಿರ ರೂಪಾಯಿ ಸಂಬಳ ಹೆಚ್ಚಳವಾಗಿದೆ. ಇದರಿಂದ ಸಂಸಾರ ನಡೆಸೋದು ಕಷ್ಟ ಎಂದು ಆ ಪೇದೆ ಅಳಲುತೋಡಿಕೊಂಡಿದ್ದಾರೆ.
ಭಡ್ತಿ ಸೇರಿದಂತೆ ಪೊಲೀಸರು ಎದುರಿಸುತ್ತಿರುವ ವಿವಿಧ ಸಮಸ್ಯೆ ಬಗೆಹರಿಸುವಂತೆ ಆ ಪೇದೆ ಅಂಗಲಾಚಿದ್ದಾರೆ.
ಕಾನ್ಸ್ಟೇಬಲ್’ರನ್ನು ಸಮಾಧಾನಪಡಿಸಿದ ಸಚಿವ ಪರಮೇಶ್ವರ್, ಪೊಲೀಸರ ವೇತನ ಹೆಚ್ಚಳ ಸೇರಿದಂತೆ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.