ಡೈರಿ ಹಿಂದೆ ಕಾಣದ ಕೈಗಳು: ವಿಶ್ವನಾಥ್

Published : Feb 24, 2017, 04:15 PM ISTUpdated : Apr 11, 2018, 12:40 PM IST
ಡೈರಿ ಹಿಂದೆ ಕಾಣದ ಕೈಗಳು: ವಿಶ್ವನಾಥ್

ಸಾರಾಂಶ

ತಕ್ಷಣ ಗೋವಿಂದರಾಜುವನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿದ  ವಿಶ್ವನಾಥ್, ಗೃಹ ಸಚಿವ ಪರಮೇಶ್ವರ್ ತಕ್ಷಣ ಈ ಬಗ್ಗೆ ಗೋವಿಂದರಾಜು ಮೇಲೆ ಕೇಸು ಹಾಕಿ ತನಿಖೆ ಮಾಡಿಸಲಿ.

ಮೈಸೂರು (ಫೆ.24): ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಸಲು ಕಾಣದ ಕೈಗಳು ಎಂಎಲ್’ಸಿ ಗೋವಿಂದರಾಜು ಮೂಲಕ ಷಡ್ಯಂತ್ರ ಮಾಡಿವೆ ಎಂದು ಹಿರಿಯ ಕಾಂಗ್ರೆಸ್ಸಿಗ ಹೆಚ್​.ವಿಶ್ವನಾಥ್​ ಮೈಸೂರಿನಲ್ಲಿ ಹೇಳಿದ್ದಾರೆ.

ಡೈರಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾತ್ರವೇನೂ ಇಲ್ಲ. ಹೈಕಮಾಂಡನ್ನು ಅನಗತ್ಯ ಎಳೆದು ತರುವುದು ಸರಿಯಲ್ಲ ಎಂದಿದ್ದಾರೆ.

ತಕ್ಷಣ ಗೋವಿಂದರಾಜುವನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿರುವ ಅವರು, ಗೃಹ ಸಚಿವ ಪರಮೇಶ್ವರ್ ತಕ್ಷಣ ಈ ಬಗ್ಗೆ ಗೋವಿಂದರಾಜು ಮೇಲೆ ಕೇಸು ಹಾಕಿ ತನಿಖೆ ಮಾಡಿಸಲಿ.

ಅವರನ್ನು ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆಯಬೇಕು ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಡೈರಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದಿರುವ ವಿಶ್ವನಾಥ್. ಡೈರಿ ವಿವಾದ ಪ್ರಧಾನಿ ಮೋದಿ ಅವರ ಕೊರಳಿಗೂ ಸುತ್ತಿಕೊಂಡಿತ್ತು ಎಂದಿದ್ದಾರೆ.

ಡೈರಿಯಲ್ಲಿ ಹೆಸರು ಕೇಳಿ ಬಂದಿರುವ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ದಿಗ್ವಿಜಯ್​ ಸಿಂಗ್​ ಬಗ್ಗೆ ಕಿಡಿಕಾರಿದ ಅವರು, ಆರು ತಿಂಗಳ ಹಿಂದೆಯೇ ದಿಗ್ವಿಜಯ ಸಿಂಗ್ ಬದಲಿಸಿ ಬೇರೆ ನೇಮಿಸಿ ಎಂದು ಕೇಳಿಕೊಂಡಿದ್ದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್