
ನವದೆಹಲಿ : 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆಯಲು ಅನೇಕ ರೀತಿಯ ಚಾಲೇಂಜ್ ಗಳನ್ನು ಸ್ವೀಕಾರ ಮಾಡಿತ್ತು. ಪ್ರಮುಖವಾಗಿ ಈ ಚಾಲೇಂಜ್ ನಲ್ಲಿ ಗಂಗಾ ನದಿಯನ್ನು ಶುದ್ದೀಕರಣ ಮಾಡುವುದು ಪ್ರಮುಖ ವಿಚಾರವಾಗಿತ್ತು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಸುಳ್ಳು ಫೊಟೊವನ್ನು ಟ್ವೀಟ್ ಮಾಡಿ ಗಂಗಾ ನದಿಯ ಶುದ್ಧೀಕರಣ ಮಾಡುವ ಬಗ್ಗೆ ಭರವಸೆ ನೀಡಿದ್ದ ಬಿಜೆಪಿ ಮಾತು ಮಾತಾಗಿಯೇ ಉಳಿದಿದೆ ಎಂದು ಟ್ವೀಟ್ ಮಾಡಿದೆ.
ಆದರೆ ಈ ಫೊಟೊದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ ಈ ಫೊಟೊ 2009ಕ್ಕಿಂತಲೂ ಕೂಡ ಹಳಡೆಯದು ಎನ್ನುವ ವಿಚಾರ ತಿಳಿದು ಬಂದಿದೆ. ಅಲ್ಲದೇ ಇದು ರೊಮೇನಿಯನ್ ವೆಬ್ ಸೈಟ್ ಒಂದು 2009ಕ್ಕಿಂತ ಮೊದಲೇ ಬಳಕೆ ಮಾಡಿದ ಫೊಟೊ ಎನ್ನುವ ವಿಚಾರವೂ ಕೂಡ ರಿವೀಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ