ಪೆಟ್ರೋಲ್ ಹಾಕಿ ಸುಡುವುದಾಗಿ ಅನ್ನದಾತನಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ

Published : Nov 18, 2016, 05:16 AM ISTUpdated : Apr 11, 2018, 01:12 PM IST
ಪೆಟ್ರೋಲ್ ಹಾಕಿ ಸುಡುವುದಾಗಿ ಅನ್ನದಾತನಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿಯ ಸರ್ವೇ ನಂ.೫೧ ಜಮೀನು ಮಾಲೀಕರಾದ ರಾಜಣ್ಣ ಎಂಬುವರು ತಮ್ಮ ಜಮೀನನ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್​ನಿಂದ ಜಮೀನು ಹದಗೊಳಿಸಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಚಂದ್ರಶೇಖರ್ ಏಕಾಏಕಿ ರೈತನ ಬಳಿ ತೆರಳಿ ಈ ಜಮೀನು ತನಗೆ ಸೇರಿದ್ದಾಗಿ ತಗಾದೆ ತೆಗೆದು ಉಳುಮೆಗೆ ತಡೆಯೊಡ್ಡಿದ್ದಾರೆ. 

ಬೆಂಗಳೂರು(ನ.18): ಜಮೀನು ವಿಚಾರವಾಗಿ ಕೆ.ಆರ್.ಪೇಟೆಯ ಕಾಂಗ್ರೆಸ್ ಮಾಜಿ  ಶಾಸಕ ಕೆ.ಬಿ.ಚಂದ್ರಶೇಖರ್ ಅಮಾಯಕ ರೈತ ಕುಟುಂಬದ ಇಬ್ಬರ ಮೇಲೆ ಹಲ್ಲೆ ಮಾಡಿ, ಪೆಟ್ರೋಲ್ ಹಾಕಿ ಸುಟ್ಟು ಹಾಕುವುದಾಗಿ ಬೆದರಿಸಿರುವ ಘಟನೆ ನಡೆದಿದೆ. 

ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿಯ ಸರ್ವೇ ನಂ.೫೧ ಜಮೀನು ಮಾಲೀಕರಾದ ರಾಜಣ್ಣ ಎಂಬುವರು ತಮ್ಮ ಜಮೀನನ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್​ನಿಂದ ಜಮೀನು ಹದಗೊಳಿಸಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಚಂದ್ರಶೇಖರ್ ಏಕಾಏಕಿ ರೈತನ ಬಳಿ ತೆರಳಿ ಈ ಜಮೀನು ತನಗೆ ಸೇರಿದ್ದಾಗಿ ತಗಾದೆ ತೆಗೆದು ಉಳುಮೆಗೆ ತಡೆಯೊಡ್ಡಿದ್ದಾರೆ. 

ಅಲ್ಲದೆ ಉಳುಮೆ ಮಾಡಲು ಮುಂದಾದ್ರೆ ಸ್ಥಳದಲ್ಲಿ ಟ್ರ್ಯಾಕ್ಟರ್ ಸಮೇತ ನಿಮ್ಮನ್ನು ಪೆಟ್ರೋಲ್​ ನಿಂದ ಸುಟ್ಟು ಹಾಕೋದಾಗಿ ಕೊಲೆ ಬೆದರಿಕೆ ಒಡ್ಡಿ ಆವಾಜ್ ಹಾಕಿದ್ದಾರೆ. ಮಾಜಿ ಶಾಸಕರ ಕ್ರಮ ಖಂಡಿಸಿ ರೈತ ರಾಜಣ್ಣ ಪಟ್ಟಣದ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದ್ರೆ ಪೊಲೀಸಲು ಮಾಜಿ‌ ಶಾಸಕರ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದು ರೈತ ಸೇರಿದಂತೆ ಸಾರ್ವಜನಿಕರಿಂದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ