ಮತ್ತೊಬ್ಬ ಪ್ರಬಲ ಹಿರಿಯ ನಾಯಕ, 6 ಬಾರಿಯ ಶಾಸಕ ಕಾಂಗ್ರೆಸ್'ಗೆ ಗುಡ್'ಬೈ ! ಚುನಾವಣೆಯಲ್ಲಿ 'ಕೈ'ಗೆ ದೊಡ್ಡ ಹೊಡೆತ

Published : Mar 26, 2018, 09:12 PM ISTUpdated : Apr 11, 2018, 12:50 PM IST
ಮತ್ತೊಬ್ಬ ಪ್ರಬಲ ಹಿರಿಯ ನಾಯಕ, 6 ಬಾರಿಯ ಶಾಸಕ ಕಾಂಗ್ರೆಸ್'ಗೆ ಗುಡ್'ಬೈ ! ಚುನಾವಣೆಯಲ್ಲಿ 'ಕೈ'ಗೆ ದೊಡ್ಡ ಹೊಡೆತ

ಸಾರಾಂಶ

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತಿಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು, ಸಚಿವ ಸಂಪುಟ ಸೇರದಂತೆ ಸಿಎಂ ಮೇಲೆ ಖರ್ಗೆ ಒತ್ತಡ ಹೇರಿದ್ದಾರೆ ಅನ್ನೋ ಆರೋಪ ಹೊರಿಸಿದ್ದಾರೆ.

ಕಲ್ಬುರ್ಗಿ(ಮಾ.26): ಉತ್ತರ ಕರ್ನಾಟಕದ ಪ್ರಬಲ ಮುಖಂಡ, ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ಪಕ್ಷಕ್ಕೆ ಗುಡ್'ಬೈ ಹೇಳಲಿದ್ದಾರೆ.

ರಾಜ್ಯನಾಯಕರ ಧೋರಣೆಗೆ ಬೇಸತ್ತು ಬಿಜೆಪಿಯತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗಿದೆ. ನೀಡಿದ ಭರವಸೆಗಳನ್ನು ಈಡೇರಿಸದ ಕೈ ನಾಯಕರ ಧೋರಣೆಗೆ ಗುತ್ತೇದಾರ್ ಬೇಸರಗೊಂಡಿದ್ದಾರೆ. ಮಾತುಕತೆಗೂ ಕರೆಯದೇ ನಿರ್ಲಕ್ಷಿಸಿದ ಸಿಎಂ ಸಿದ್ದರಾಮಯ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ' ಎನ್ನಲಾಗಿದೆ.

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತಿಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು, ಸಚಿವ ಸಂಪುಟ ಸೇರದಂತೆ ಸಿಎಂ ಮೇಲೆ ಖರ್ಗೆ ಒತ್ತಡ ಹೇರಿದ್ದಾರೆ ಅನ್ನೋ ಆರೋಪ ಹೊರಿಸಿದ್ದಾರೆ. ಈಡಿಗ ಸಮುದಾಯಕ್ಕೆ ಸೇರಿರುವ ಇವರು ಅಫ್ಜಲ್'ಪುರ ಕ್ಷೇತ್ರದಿಂದ 6 ಬಾರಿ ಶಾಸಕರಾಗಿದ್ದಾರೆ. ಯಾದಗಿರಿ, ಕಲ್ಬುರ್ಗಿ ಜಿಲ್ಲೆಯಲ್ಲಿ ಹೆಚ್ಚು ಹಿಡಿತ ಹೊಂದಿದ್ದು ಬಿಜೆಪಿ ಸೇರ್ಪಡೆಯಾದರೆ ರಾಜಕೀಯವಾಗಿ ಅನುಕೂಲವಾಗುವ ಸಾಧ್ಯತೆಯಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ: ಸಿಎಂಗೆ ಮಹಿಳಾ ಆಯೋಗ ಮನವಿ
ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ: ಮುನಿಯಪ್ಪ