ಭುಗಿಲೆದ್ದ ಅಸಮಾಧಾನ : ಕಾಂಗ್ರೆಸ್ ತೊರೆಯುತ್ತಾರಾ ಹಿರಿಯ ಶಾಸಕ..?

Published : Jun 15, 2019, 12:35 PM ISTUpdated : Jun 15, 2019, 12:48 PM IST
ಭುಗಿಲೆದ್ದ ಅಸಮಾಧಾನ : ಕಾಂಗ್ರೆಸ್ ತೊರೆಯುತ್ತಾರಾ ಹಿರಿಯ ಶಾಸಕ..?

ಸಾರಾಂಶ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಇದಾದ ಬಳಿಕ ಹಲವು ನಾಯಕರಿಂದ ಅಸಮಾಧಾನ ಭುಗಿಲೇಳುತ್ತಿದೆ. ಇದೀಗ ಕೈ ಶಾಸಕರೋರ್ವರು ಕುಪಿತಗೊಂಡಿದ್ದು, ಕೈ ನಿಂದ ದೂರವಾಗುತ್ತಾರಾ ಎನ್ನುವ ಸಂಶಯ ಮೂಡಿದೆ. 

ಬೆಂಗಳೂರು [ಜೂ.15] : ಲೋಕಸಭಾ ಚುನಾವಣೆ ಬಳಿಕ ಮಂತ್ರಿ ಮಾಡುವುದಾಗಿ ಮಾತು ಕೊಟ್ಟು ಕೈಕೊಟ್ಟಿದ್ದಾರೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದು ಕಾಂಗ್ರೆಸ್ ಪಕ್ಷ. ಧ್ವನಿ ಇದ್ದವರು ಇಲ್ಲಿ ಬೇಕಾಗಿಲ್ಲ. ಪಕ್ಷ ಉಳಿಯಬೇಕು, ಬೆಳೆಯಬೇಕು ಎಂಬುವುದು ಇಲ್ಲ, ಸರ್ಕಾರ ಉಳಿದು ತಾವು ಚೆನ್ನಾಗಿದ್ದರೆ ಸಾಕು ಎಂಬ ಸ್ಥಿತಿಯಲ್ಲಿ ನಾಯಕರಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ಎಲ್ಲರೂ ಮಾತು ತಪ್ಪಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಲೋಕಸಭೆ ಚುನಾವಣೆ ಬಳಿಕ ಮಂತ್ರಿ ಸ್ಥಾನ ಕೊಡುವುದಾಗಿ ಪ್ರಾಮಿಸ್ ಮಾಡಿ ಕೈಕೊಟ್ಟಿದ್ದಾರೆ. ಮುಂದೇನು, ಕಾದು ನೋಡೋಣ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!