ಲೋಕಸಭೆ ಚುನಾವಣೆಯೊಂದಿಗೆ ರಾಮಮಂದಿರ ವಿವಾದ ಜೋಡಿಸಲು ಕಾಂಗ್ರೆಸ್ ಯತ್ನ: ಪ್ರಧಾನಿ ಮೋದಿ

Published : Dec 06, 2017, 04:01 PM ISTUpdated : Apr 11, 2018, 12:51 PM IST
ಲೋಕಸಭೆ ಚುನಾವಣೆಯೊಂದಿಗೆ ರಾಮಮಂದಿರ ವಿವಾದ ಜೋಡಿಸಲು ಕಾಂಗ್ರೆಸ್ ಯತ್ನ: ಪ್ರಧಾನಿ ಮೋದಿ

ಸಾರಾಂಶ

ರಾಮಮಂದಿರ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ರಾಮಮಂದಿರ ಮತ್ತು 2019ರ ಲೋಕಸಭಾ ಚುನಾವಣೆಗಳ ನಡುವೆ ಸಂಬಂಧ ಕಲ್ಪಿಸಲು ಯತ್ನಿಸುತ್ತಿದೆಯೆಂದು ಹೇಳಿದ್ದಾರೆ.

ಧನ್ದೂಕ, ಗುಜರಾತ್: ರಾಮಮಂದಿರ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ರಾಮಮಂದಿರ ಮತ್ತು 2019ರ ಲೋಕಸಭಾ ಚುನಾವಣೆಗಳ ನಡುವೆ ಸಂಬಂಧ ಕಲ್ಪಿಸಲು ಯತ್ನಿಸುತ್ತಿದೆಯೆಂದು ಹೇಳಿದ್ದಾರೆ.

ಇಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಾಬರೀ ಮಸೀದಿ ಪರ ವಾದಿಸುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ವಕೀಲ ಕಪಿಲ್ ಸಿಬಲ್ ವಿರುದ್ಧ ಟೀಕಾ ಪ್ರಹಾರಗೈದಿದ್ದಾರೆ.

ಕಪಿಲ್ ಸಿಬಲ್ ಬಾಬರೀ ಮಸೀದಿ ವಿಚಾರಣೆಯನ್ನು ಲೋಕಸಭಾ ಚುನಾವ ಣೆವರೆಗೆ ಮುಂದೂಡಬಯಸುತ್ತಿದ್ದಾರೆ. 2019ರ ಚುನಾವಣೆಗೂ ರಾಮಮಂದಿರಕ್ಕೂ ಸಂಪರ್ಕ ಕಲ್ಪಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಬರೀ ಮಸೀದಿ ಧ್ವಂಸಗೊಂಡು ಇಂದಿಗೆ 25 ವರ್ಷಗಳು ಕಳೆದಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ 200 ಮುಸ್ಲಿಮರ ಮನೆ ಧ್ವಂಸ : ಕೇರಳ ಸಿಎಂ ಕಿಡಿ
ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ