
ಬೆಂಗಳೂರು : ರಾಹುಲ್ ಗಾಂಧಿ ಪ್ರವಾಸದ ವೇಳೆ ಪ್ರಮುಖ ಕಾಂಗ್ರೆಸ್ ಮುಖಂಡರು ಗೈರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಹತ್ತು ಹಲವು ಚರ್ಚೆ ಮುಂದುವರಿದಿದೆ. ರಮ್ಯಾ, ಅಂಬರೀಶ್ ಮತ್ತು ಸಚಿವ ಎಂ.ಕೃಷ್ಣಪ್ಪ ಗೈರಾದ ಹಿನ್ನೆಲೆಯಲ್ಲಿ ರಾಹುಲ್ ಪ್ರವಾಸದ ವೇಳೆ ಉದ್ದೇಶ ಪೂರ್ವಕವಾಗಿ ಗೈರಾದ್ರಾ ನಾಯಕರು ಎನ್ನುವ ಪ್ರಶ್ನೆ ಮೂಡಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಗೈರಾಗಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ. ಆದರೆ ಗೈರಾಗಿರೋದಕ್ಕೆ ಇನ್ನೂ ಯಾವುದೇ ರೀತಿಯಾದ ಕಾರಣವನ್ನೂ ಕೂಡ ಅವರು ನೀಡಿಲ್ಲ.
ಇನ್ನು ರಾಹುಲ್ ಪ್ರವಾಸದ ವೇಳೆ ಅಂಬರೀಶ್ ಅವರೂ ಕೂಡ ಗೈರಾಗಿದ್ದು, ರಮ್ಯಾ ಆಗಮಿಸುತ್ತಾರೆ ಎನ್ನುವ ಉದ್ದೇಶದಿಂದ ಬರಲಿಲ್ಲವೇ ಎನ್ನುವ ಪ್ರಶ್ನೆಗಳೂ ಕೂಡ ಮೂಡಿವೆ. ಪ್ರಭಾವಿ ನಾಯಕ ಅಂಬರೀಶ್ ಗೈರು ಹಾಜರಿಯ ಬಗ್ಗೆ ಗೊಂದಲ ಎದುರಾಗಿದೆ.
ರಮ್ಯಾ ಮತ್ತು ಅಂಬರೀಷ್ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಕೈ ನಾಯಕರ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಅಂಬರೀಶ್ ಗೈರು ಹಾಜರಾಗಿದ್ದರು ಎನ್ನಲಾಗುತ್ತಿದೆ.
ರಾಹುಲ್ ಪ್ರವಾಸದ ವೇಳೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಕೂಡ ಗೈರಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.