ಸ್ಪೀಕರ್‌ ಮುಂದೆ ಸಿದ್ದರಾಮಯ್ಯ ಇಟ್ಟ ಬೇಡಿಕೆ, ಬೆಚ್ಚಿ ಬೀಳುವ ಸರದಿ ಅತೃಪ್ತರದ್ದು!

Published : Jul 24, 2019, 04:16 PM ISTUpdated : Jul 24, 2019, 04:22 PM IST
ಸ್ಪೀಕರ್‌ ಮುಂದೆ ಸಿದ್ದರಾಮಯ್ಯ ಇಟ್ಟ ಬೇಡಿಕೆ, ಬೆಚ್ಚಿ ಬೀಳುವ ಸರದಿ ಅತೃಪ್ತರದ್ದು!

ಸಾರಾಂಶ

ದೋಸ್ತಿ ಸರಕಾರ ಅಂತ್ಯ ಕಂಡಿದೆ. ಒಂದು ಕಡೆ ಬಿಜೆಪಿ ಅಧಿಕಾರದ ಹಕ್ಕು ಸ್ಥಾಪನೆಗೆ ಮುಂದಾಗುತ್ತಿದೆ. ಸರ್ಕಾರ ಕೆಡವಲು ಪ್ರಮುಖ ಕಾರಣರಾದ ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರಿಗೆ ತಕ್ಕ ಪಾಢ ಕಲಿಸಿವವರೆಗೂ ಮಾಜಿ ಸಿಎಂ ಸಿದ್ದರಾಂಯ್ಯ ಮಾತ್ರ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.

ಬೆಂಗಳೂರು(ಜು. 24)  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ಉರುಳಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಮಾಡಿಕೊಂಡಿರುವ ಮನವಿ ನಿಜಕ್ಕೂ ಅತೃಪ್ತರು ಮಾತ್ರವಲ್ಲ ಮುಂದೆ ಪಕ್ಷ ತೊರೆಯುವ ಆಲೋಚಜನೆಯಲ್ಲಿರುವವರಿಗೂ ನಡುಕ ಹುಟ್ಟಿಸಿದೆ.

ಅತೃಪ್ತರ ಮೇಲೆ ಕ್ರಮ ತೆಗೆದುಕೊಳ್ಳಬೇಕು... ಪದೇ ಪದೇ ಪಕ್ಷ ತೊರೆಯುವವರಿಗೆ ಪಾಠವಾಗುವಂತಹ ನಿರ್ಧಾರ ತೆಗೆಗೆದುಕೊಳ್ಳಬೇಕು. ಪಕ್ಷದಿಂದ ಗೆದ್ದು ಬಂದ ಮೇಲೆ ನಿಷ್ಠರಾಗಿರಬೇಕು.  ಪಕ್ಷದ ತತ್ವ ಸಿದ್ಧಾಂತಗಳಿಗೆ ಯಾವಾಗಲೂ ಬದ್ಧರಾಗಿರಬೇಕು. ಅವರೂ ಯಾವುದೇ ಪಕ್ಷದ ಶಾಸಕರಾದರೂ ಸರಿಯೇ..? ಇವತ್ತು ನಮ್ಮ ಪಕ್ಷ, ನಾಳೆ ಬೇರೆ ಪಕ್ಷಕ್ಕೂ ಇದೇ ಆಗಬಹುದು. ಹಾಗಾಗಿ ಒಂದು ಮಾದರಿ ಐತಿಹಾಸಿಕ ದಾಖಲೆಯಾಗುವಂತಹ ನಿರ್ಧಾರ  ತೆಗೆದುಕೊಳ್ಳಿ ಎಂದಿದ್ದಾರೆ.

ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

ರಾಜೀನಾಮೆ ಕೊಟ್ಟು ಈ ರೀತಿ ಗೊಂದಲ ಸೃಷ್ಟಿಮಾಡುವವರನ್ನು ಅನತರ್ಹ ಮಾಡಿಬಿಡಿ. ಮುಂದೆ ಯಾವ ಪಕ್ಷದ ಯಾರೂ ಇಂಥ ಹೆಜ್ಜೆ ಇಡದಂತಹ ಪಾಠ ಕಲಿಸಿ ಎಂದು ಕೇಳಿಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ