
ಬೆಂಗಳೂರು(ಎ.28): ರಾಜ್ಯದಲ್ಲಿ ಆಡಳಿತ ವಿರೋಧಿ ಹವಾ ಎದ್ದಿದೆ, ನಮ್ಮ ಪರ ಮೋದಿ ಹವಾ ಹಾಗೂ ಯಡಿಯೂರಪ್ಪ ಮೋಡಿ ಕೆಲಸ ಮಾಡಲಿದೆ. ಹೀಗಾಗಿ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ ಎಂಬ ಕೆಚ್ಚಿನಲ್ಲಿದ್ದ ಬಿಜೆಪಿ ಪಾಳೆಯದ ಅಗ್ರೇ ಸರರು ಈಗ ಶರಂಪರ ಜಗಳ ಆರಂಭಿಸಿರುವುದು ಕಾಂಗ್ರೆಸ್ ವಲಯದಲ್ಲಿ ಭಾರಿ ಸಂತೋಷದ ಅಲೆ ಎಬ್ಬಿಸಿದೆ.
ಬಿಜೆಪಿ ಸಾರಾಸಗಟಾಗಿ ಮೇಲ್ವರ್ಗವನ್ನು ತನ್ನೆ ಡೆಗೆ ಸೆಳೆಯಲಿದೆ. ತನ್ಮೂಲಕ ಕಾಂಗ್ರೆಸ್'ಗೆ ಮುಂದಿನ ಬಾರಿ ಕಷ್ಟವಾಗುತ್ತದೆ ಎಂದೇ ಬಿಂಬಿಸಲಾಗುತ್ತಿತ್ತು. ಬಿಜೆಪಿ ನಾಯಕರಂತೂ ಮುಂದಿನ ಸರ್ಕಾರ ತಮ್ಮದೇ ಎಂಬಂತೇ ಸಾರ್ವಜನಿಕ ವರ್ತನೆ ಆರಂಭಿಸಿದ್ದರು. ಇದರ ಪರಿಣಾಮವಾಗಿ ಕಾಂಗ್ರೆಸ್ ಗಂಭೀರವಾಗಿ ಸಮಾಜದ ವಿವಿಧ ಜಾತಿ ವರ್ಗಗಳ ಮನವೊಲಿಕೆಗೆ ಮುಂದಾಗಿತ್ತು. ಬಸವಣ್ಣ ಜಯಂತಿಯಂ ತಹ ಕ್ರಮಗಳ ಮೂಲಕ ಸರ್ಕಾರ ಮೇಲ್ವರ್ಗದ ವಿರುದ್ಧವಿಲ್ಲ ಎಂಬ ಸಂದೇಶ ನೀಡಲು ಯತ್ನಿಸುತ್ತಿತ್ತು. ಜತೆಗೆ, ಕಾಂಗ್ರೆಸ್'ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವ, ಮುನಿದ ನಾಯಕರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತ್ತು.
ಇಷ್ಟಾದರೂ ಬಿಜೆಪಿ ಪ್ರಭಾವ ಎದುರಿಸಲು ಸಾಧ್ಯವಾಗುವುದಿಲ್ಲ, ಜಾತ್ಯತೀತ ಮತಗಳನ್ನು ಒಗ್ಗೂಡಿಸದೇ ಕಮಲ ಪಕ್ಷವನ್ನು ಮಣಿಸುವುದು ಕಷ್ಟಎಂದು ಅರಿತಿದ್ದರು. ಇದರ ಫಲವಾಗಿಯೇ ನಂಜನಗೂಡು ಹಾಗೂ ಗುಂಡ್ಲು ಪೇಟೆಯಲ್ಲಿ ಜೆಡಿಎಸ್ನ ಪರೋಕ್ಷ ಬೆಂಬಲ ಪಡೆದ ಕಾಂಗ್ರೆಸ್ ಜಯಭೇರಿ ಬಾರಿಸಿತು. ಈ ಸಂಬಂಧವನ್ನು ಮುಂದಿನ ಚುನಾವಣೆಯಲ್ಲೂ ಮುಂದುವರೆಸುವ ಉಮೇದಿ ಕಾಂಗ್ರೆಸ್ಗೆ ಇದೆ. ಈ ಸಮಯದಲ್ಲೇ ಬಿಜೆಪಿಯ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಸಹಜವಾಗಿಯೇ ಈ ಬೆಳವಣಿಗೆ ಬಿಜೆಪಿಯ ವರ್ಚಸ್ಸಿಗೆ ಭಾರಿ ಧಕ್ಕೆ ಉಂಟು ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.