ಮೋದಿ ಎಚ್ಚರಿಕೆ ಒಂದು ನಾಟಕ: ಕಾಂಗ್ರೆಸ್ ಟೀಕೆ ಅಕಟಕಟ!

Published : Jul 02, 2019, 05:43 PM IST
ಮೋದಿ ಎಚ್ಚರಿಕೆ ಒಂದು ನಾಟಕ: ಕಾಂಗ್ರೆಸ್ ಟೀಕೆ ಅಕಟಕಟ!

ಸಾರಾಂಶ

ಪ್ರಧಾನಿ ಮೋದಿ ಎಚ್ಚರಿಕೆಯ ನಾಟಕವಾಡಿದ್ದಾರೆ ಎಂದ ಕಾಂಗ್ರೆಸ್| ಅಧಿಕಾರಿ ಮೇಲೆ ಬ್ಯಾಟ್’ನಿಂದ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕ| ಬಿಜೆಪಿ ಸಂಸದೀಯ ಪಕ್ಷದಲ್ಲಿ ಮೋದಿ ನೀಡಿದ್ದ ಎಚ್ಚರಿಕೆ| ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲ್ಲ ಎಂದಿದ್ದ ಪ್ರಧಾನಿ| ಪ್ರಧಾನಿ ಮೋದಿಯಿಂದ ಕಣ್ಣೋರೆಸುವ ತಂತ್ರ ಎಂದ ಕಾಂಗ್ರೆಸ್| ಆಕಾಶ್ ವಿಜಯ್ ವರ್ಗೀಯ ವಿರುದ್ಧ ಕ್ರಮಕ್ಕೆ ಆಗ್ರಹ| 

ನವದೆಹಲಿ(ಜು.02): ಕಾನೂನು ಕೈಗೆತ್ತಿಕೊಳ್ಳುವ ಪಕ್ಷದ ಶಾಸಕರಿಗೆ ಮತ್ತು ಸಂಸದರಿಗೆ, ಪ್ರಧಾನಿ ನರೇಂದ್ರ ಮೋದಿ ನೀಡಿರುವ ಎಚ್ಚರಿಕೆ ಕೇವಲ ನಾಟಕ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಪುತ್ರ ಆಕಾಶ್ ವಿಜಯ್ ವರ್ಗೀಯ, ಕರ್ತವ್ಯನಿರತ ಅಧಿಕಾರಿ ಮೇಲೆ ಬ್ಯಾಟ್’ನಿಂದ ಹಲ್ಲೆ ನಡೆಸಿದ್ದರು.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿ, ದುರ್ವರ್ತನೆ ತೋರುವ ಯಾರೇ ಆದರೂ ಅವರನ್ನು ಕಾನೂನು ಶಿಕ್ಷಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಮೋದಿ ಅವರ ಎಚ್ಚರಿಕೆಯನ್ನು ಕಣ್ಣೋರೆಸುವ ತಂತ್ರ ಎಂದು ಜರೆದಿರುವ ಕಾಂಗ್ರೆಸ್, ಮೋದಿ ಅವರಿಗೆ ನಿಜಕ್ಕೂ ಕಾನೂನಿನ ಮೇಲೆ ಗೌರವವಿದ್ದರೆ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ತಮ್ಮ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ, ಶಾಸಕ ಆಕಾಶ್ ವಿಜಯ್ ವರ್ಗೀಯ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ, ಅಮಿತ್ ಶಾ ಅವರನ್ನು ಯಾರು ತಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!