ಸಭಾಪತಿ ಯುದ್ಧ; ಜೆಡಿಎಸ್'ನ್ನು ಗಾಳಕ್ಕೆ ಬೀಳಿಸಲು ಕಾಂಗ್ರೆಸ್'ನಿಂದ ಹೊರಟ್ಟಿ ಅಸ್ತ್ರ

Published : Jun 15, 2017, 11:32 AM ISTUpdated : Apr 11, 2018, 12:51 PM IST
ಸಭಾಪತಿ ಯುದ್ಧ; ಜೆಡಿಎಸ್'ನ್ನು ಗಾಳಕ್ಕೆ ಬೀಳಿಸಲು ಕಾಂಗ್ರೆಸ್'ನಿಂದ ಹೊರಟ್ಟಿ ಅಸ್ತ್ರ

ಸಾರಾಂಶ

ಸೆಕ್ಯೂಲರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಇರಬೇಕೆಂಬುದು ನಮ್ಮ ಆಶಯ. ಬಸವರಾಜ್ ಹೊರಟ್ಟಿಯವರನ್ನ ಸಭಾಪತಿಯನ್ನಾಗಿ ಮಾಡಲು ಜೆಡಿಎಸ್ ಬಯಸಿದಲ್ಲಿ ಕಾಂಗ್ರೆಸ್ ಫುಲ್ ಸಪೋರ್ಟ್ ಕೊಡುತ್ತದೆ. ನಮ್ಮ ಉದ್ದೇಶವೂ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು(ಜೂನ್ 15): ಬಿಜೆಪಿಯ ಡಿಎಚ್ ಶಂಕರಮೂರ್ತಿಯವರನ್ನು ಹೇಗಾದರೂ ಮಾಡಿ ಪರಿಷತ್ ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಪಣ ತೊಟ್ಟಂತಿದೆ. ಇಂದು ಶಂಕರಮೂರ್ತಿ ವಿರುದ್ಧ ನಡೆಯುವ ಅವಿಶ್ವಾಸ ನಿರ್ಣಯದಲ್ಲಿ ಜಯ ಸಾಧಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಸಭಾಪತಿ ವಿಚಾರದಲ್ಲಿ ಬಿಜೆಪಿ ಜೊತೆ ಸಖ್ಯ ಮುಂದುವರಿಸುವುದಾಗಿ ನಿನ್ನೆ ಜೆಡಿಎಸ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರೂ ಕಾಂಗ್ರೆಸ್ ಆಸೆ ಕೈಬಿಟ್ಟಿಲ್ಲ. ಜೆಡಿಎಸ್'ನ ನಿಲುವನ್ನು ಬದಲಿಸಲು ಕಾಂಗ್ರೆಸ್ ಪಕ್ಷ ಈಗ ಜಾತ್ಯತೀತ ಅಸ್ತ್ರ ಹೂಡಿದೆ. ಜೊತೆಗೆ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದಾಗಿ ಕಾಂಗ್ರೆಸ್ ಆಫರ್ ಕೊಟ್ಟಿದೆ.

ಸೆಕ್ಯೂಲರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಇರಬೇಕೆಂಬುದು ನಮ್ಮ ಆಶಯ. ಬಸವರಾಜ್ ಹೊರಟ್ಟಿಯವರನ್ನ ಸಭಾಪತಿಯನ್ನಾಗಿ ಮಾಡಲು ಜೆಡಿಎಸ್ ಬಯಸಿದಲ್ಲಿ ಕಾಂಗ್ರೆಸ್ ಫುಲ್ ಸಪೋರ್ಟ್ ಕೊಡುತ್ತದೆ. ನಮ್ಮ ಉದ್ದೇಶವೂ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಎಚ್'ಡಿಕೆ ನಿನ್ನೆ ಹೇಳಿದ್ದೇನು?
"ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಜತೆ ಈಗಿರುವ ಮೈತ್ರಿಯನ್ನೇ ಮುಂದುವರೆಸಬೇಕು ಎಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಸದಸ್ಯರೂ ಗುರುವಾರದ ಕಲಾಪದಲ್ಲಿ ಹಾಜರಿರುವಂತೆ ವಿಪ್‌ ಜಾರಿಗೊಳಿಸಲಾಗಿದೆ. ಯಾರಿಗೆ ಮತ ನೀಡಬೇಕು ಎಂಬುದನ್ನೂ ಅವರಿಗೆ ತಿಳಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ