ಹೊಸ ಎಂಆರ್’ಪಿ ಮರುಮುದ್ರಿಸದಿದ್ದರೆ ಜೈಲು

Published : Jul 07, 2017, 03:57 PM ISTUpdated : Apr 11, 2018, 12:46 PM IST
ಹೊಸ ಎಂಆರ್’ಪಿ ಮರುಮುದ್ರಿಸದಿದ್ದರೆ ಜೈಲು

ಸಾರಾಂಶ

ಜಿಎಸ್ಟಿ ಬಳಿಕ ಸರಕುಗಳ ನೂತನ ದರಗಳನ್ನು ಮರುಮುದ್ರಿಸದಿದ್ದರೆ ತಯಾರಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವುದೆಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ.

ನವದೆಹಲಿ (ಜು.07): ಜಿಎಸ್ಟಿ ಬಳಿಕ ಸರಕುಗಳ ನೂತನ ದರಗಳನ್ನು ಮರುಮುದ್ರಿಸದಿದ್ದರೆ ತಯಾರಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವುದೆಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ.

ವಿಕ್ರಯವಾಗದ ಸರಕುಗಳನ್ನು ನೂತನ ಎಂಆರ್’ಪಿ ದರಗಳೊಂದಿಗೆ ಮಾರಾಟಮಾಡಲು ತಯಾರಕರಿಗೆ ಸೆಪ್ಟೆಂಬರ್’ವರೆಗೆ ಸಮಯಾವಕಾಶ ನೀಡಲಾಗಿದೆ.

ಗ್ರಾಹಕರ ದೂರಗಳಿಗೆ ಸ್ಪಂದಿಸಲು ಒಂದು ಸಮಿತಿಯನ್ನು ರಚಿಸಲಾಗಿದ್ದು, 14ರಷ್ಟಿದ್ದ ಸಹಾಯವಾಣಿಗಳನ್ನು 60ಕ್ಕೇರಿಸಲಾಗಿದೆ. ಈ ವರೆಗೆ ಸುಮಾರು 700 ದೂರುಗಳು ಬಂದಿದ್ದು, ಅವುಗಳನ್ನು ಪರಿಹರಿಸಲು ಹಣಕಾಸು ಇಲಾಖೆಯ ನೆರವನ್ನು ಕೋರಲಾಗಿದೆ.

ಜಿಎಸ್ಟಿಯ ಆರಂಭಿಕ ಹಂತದಲ್ಲಿ ಕೆಲವು ತೊಂದರೆಗಳಿವೆ, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಗ್ರಾಹಕರ ಹಾಗೂ ವರ್ತಕರ ದೂರುಗಳಿಗೆ ಸ್ಪಂದಿಸಲು ಗ್ರಾಹಕ ವ್ಯವಹಾರ ಇಲಾಖೆ ಹಾಗೂ ಹಣಕಾಸು ಇಲಾಖೆ  ಸನ್ನದ್ಧವಾಗಿದೆಯೆಂದು ಪಾಸ್ವಾನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ