ಸಿಎನ್ಆರ್ ರಾವ್'ಗೆ ಡಾಕ್ಟರೇಟ್

Published : Feb 11, 2017, 07:14 PM ISTUpdated : Apr 11, 2018, 12:45 PM IST
ಸಿಎನ್ಆರ್ ರಾವ್'ಗೆ ಡಾಕ್ಟರೇಟ್

ಸಾರಾಂಶ

ಭಾರತ ಬಡ ರಾಷ್ಟ್ರವಾದರೂ, ಜಗತ್ತನ್ನೇ ಮೀರಿಸುವ ಸಂಶೋಧಕರು ಇಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶ ಹಿಂದಿನಿಂದಲೂ ವೈಜ್ಞಾನಿಕತೆಗೆ ಸಂಬಂಸಿ ಅನೇಕ ಆವಿಷ್ಕಾರಗಳನ್ನು ನಡೆಸುತ್ತಿದೆ

ಉಳ್ಳಾಲ(ಫೆ.12): ಭಾರತ ರತ್ನ ಪುರಸ್ಕೃತ, ಬೆಂಗಳೂರಿನ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ ಮುಖ್ಯಸ್ಥ ಸಿ.ಎನ್.ಆರ್. ರಾವ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆ್ ಸೈನ್ಸ್’ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕುಲಾಪತಿ ವೈ. ಅಬ್ದುಲ್ಲಾ ಕುಂಞಿ ಅವರು ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ವೇಳೆ ಮಾತನಾಡಿದ ರಾವ್ ಅವರು, ಭಾರತ ಬಡ ರಾಷ್ಟ್ರವಾದರೂ, ಜಗತ್ತನ್ನೇ ಮೀರಿಸುವ ಸಂಶೋಧಕರು ಇಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶ ಹಿಂದಿನಿಂದಲೂ ವೈಜ್ಞಾನಿಕತೆಗೆ ಸಂಬಂಸಿ ಅನೇಕ ಆವಿಷ್ಕಾರಗಳನ್ನು ನಡೆಸುತ್ತಿದೆ ಎಂದರು.

ವಿಜ್ಞಾನ ಎಂಬುದು ಸಮುದಾಯ. ಇದು ಜಾತಿ ಹಾಗೂ ಬಣ್ಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನವನ ಜೀವನಚರಿತ್ರೆ ಅಧ್ಯಯನ ನಡೆಸುವುದರಿಂದ ಹಿಡಿದು ವಸ್ತುಗಳ ಆವಿಷ್ಕಾರವನ್ನು ಮಾನವೀಯ ನೆಲೆಯಲ್ಲಿ ಕಲ್ಪಿಸಿ, ರೂಪಿಸಿ ಜನರಲ್ಲಿ ಸೂರ್ತಿ ತುಂಬಿಸುವ ಪ್ರಯತ್ನವೇ ನೈಜ ವಿಜ್ಞಾನ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ-ವಿಜಯ್ ಮದುವೆಗೆ ಬಿಗ್ ಟ್ವಿಸ್ಟ್, ಫೆ. 26ಕ್ಕೆ ಮುದುವೆ ನಿಜನಾ?
ತಮ್ಮೂರು ಅರುಣಾಚಲ ಪ್ರದೇಶದ ಬುಡಕಟ್ಟು ನೃತ್ಯಕ್ಕೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಕಿರೆನ್ ರಿಜಿಜು