ಸಾಲಮನ್ನಾಗೆ ಚಿಂತನೆ ನಡೆಸುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ

Published : Jun 12, 2017, 09:00 AM ISTUpdated : Apr 11, 2018, 12:59 PM IST
ಸಾಲಮನ್ನಾಗೆ ಚಿಂತನೆ ನಡೆಸುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ

ಸಾರಾಂಶ

ಸಾಲ ಮನ್ನಾಗೆ ನನ್ನ ವಿರೋಧವಿಲ್ಲ. ಈ ವಿಚಾರ ವನ್ನು ನಾವು ಗಂಭೀರ ವಾಗಿ ಚಿಂತನೆ ನಡೆಸುತ್ತಿದ್ದೇವೆ. ಆದರೆ ರಾಜ್ಯದ ಎಲ್ಲ ರೈತರಿಗೂ ಇದರ ಪ್ರಯೋಜನ ಆಗ ಬೇಕು. ನಾವು ಸಾಲ ಮನ್ನಾ ಮಾಡಿದರೆ ಕೆಲವೇ ರೈತರಿಗೆ ಲಾಭವಾಗುತ್ತದೆ, ರೈತರ ನಡುವೆ ತಾರತಮ್ಯ ಆಗಬಾರದು ಎಂಬುದಷ್ಟೇ ನನ್ನ ಬಯಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು(ಜೂ.12): ಸಾಲ ಮನ್ನಾಗೆ ನನ್ನ ವಿರೋಧವಿಲ್ಲ. ಈ ವಿಚಾರ ವನ್ನು ನಾವು ಗಂಭೀರ ವಾಗಿ ಚಿಂತನೆ ನಡೆಸುತ್ತಿದ್ದೇವೆ. ಆದರೆ ರಾಜ್ಯದ ಎಲ್ಲ ರೈತರಿಗೂ ಇದರ ಪ್ರಯೋಜನ ಆಗ ಬೇಕು. ನಾವು ಸಾಲ ಮನ್ನಾ ಮಾಡಿದರೆ ಕೆಲವೇ ರೈತರಿಗೆ ಲಾಭವಾಗುತ್ತದೆ, ರೈತರ ನಡುವೆ ತಾರತಮ್ಯ ಆಗಬಾರದು ಎಂಬುದಷ್ಟೇ ನನ್ನ ಬಯಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ನಗರದ ತೊರವಿ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಾಲಮನ್ನಾ ಮಾಡಿದರೆ ಬರೀ ಕೆಲವೇ ರೈತರಿಗೆ ಲಾಭವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ ತಕ್ಷಣವೇ ನಾವು ಸಾಲಮನ್ನಾ ಮಾಡಿ ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿ ಸಿದರು. ಸಮಾರಂಭದಲ್ಲಿ ಸಿದ್ದರಾಮಯ್ಯಭಾಷಣ ಮಾಡುತ್ತಿದ್ದ ವೇಳೆ ಸಭಿಕರಲ್ಲಿ ಕೆಲವರು ಸಾಲಮನ್ನಾ ಮಾಡಿ ಘೋಷಣೆ ಮಾಡಬೇಕು ಎಂದು ಏರಿದ ಧ್ವನಿ ಯಲ್ಲಿ ಕೂಗಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘‘ಕುತ್ಕಳ್ರಪ್ಪ ಅದನ್ನು ಇಲ್ಲೇ ಕೇಳೋದಾ?'' ಎಂದು ಹೇಳಿದರು.

ಸಾಲಮನ್ನಾ ಮಾಡಲು ನಮ್ಮ ಸರ್ಕಾರ ಈಗಲೂ ಬದ್ಧವಿದೆ. ಸಾಲಮನ್ನಾಕ್ಕೆ ನನ್ನ ವಿರೋಧವಿಲ್ಲ. ಸಾಲಮನ್ನಾ ವಿಷಯದಲ್ಲಿ ರೈತರ ನಡುವೆ ತಾರತಮ್ಯವಾಗಬಾರದು ಎಂಬುದು ನನ್ನ ಬಯಕೆ. ನಾವು ದೆಹಲಿಗೆ ನಿಯೋಗ ಹೋಗಿ ಪ್ರಧಾನಿ ಮೋದಿ ಅವರಿಗೆ ಸಾಲಮನ್ನಾ ಮಾಡುವಂತೆ ಕೋರಿದ್ದೇವೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ