
ಬೆಂಗಳೂರು (ಜ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಪಡೆದ ಬೆಳ್ಳಿಯ ಉಡುಗೊರೆಗಳನ್ನು ಮಲೆಮಹಾದೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲು ನಿರ್ಧರಿಸಿದ್ದಾರೆ.
ಮಲೆಮಹದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಹಲವಾರು ಸಾರ್ವಜನಿಕರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಂದ ಸ್ವೀಕರಿಸಿರುವ ಹಲವಾರು ಬೆಲೆಬಾಳುವ ಬೆಳ್ಳಿಯ ಗದೆ, ಕವಚ, ಕತ್ತಿ ಮತ್ತಿತರ ಆಭರಣಗಳನ್ನು ಮಲೆ ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕಾಗಿ ನೀಡುವುದಾಗಿ ಪ್ರಕಟಿಸಿದರು.
ಇದಕ್ಕೂ ಮೊದಲು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ಮಲೇ ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕಾಗಿ 400 ಕೆ.ಜಿ. ಬೆಳ್ಳಿಯ ಅಗತ್ಯವಿದೆ ಎಂದು ಸಿಎಂ ಎದುರು ವಿವರಿಸಿದರು. ಆಗ, ‘ಸರ್ಕಾರದಿಂದ ಮತ್ತಷ್ಟು ಅನುದಾನ ವನ್ನು ಬೆಳ್ಳಿ ಖರೀದಿಗೆ ವಿನಿಯೋಗ ಮಾಡುವ ಬದಲು ನನಗೆ ಬಂದಿರುವ ಬೆಳ್ಳಿಯ ಎಲ್ಲ ವಸ್ತುಗಳನ್ನು ಸಮರ್ಪಿಸುತ್ತೇನೆ. ಅದಕ್ಕಿಂತ ಮಿಕ್ಕಿ ಬೇಕಾಗುವ ಬೆಳ್ಳಿಯನ್ನು ಮಾತ್ರ ಖರೀದಿಸಲು ಯೋಚಿಸೋಣ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.