ಅದಿರು ಸುಂಕ: ಎಚ್‌ಡಿಕೆ ಮಾತಿಗೆ ಮೋದಿ ಮನ್ನಣೆ?

Published : Jan 16, 2019, 10:33 AM IST
ಅದಿರು ಸುಂಕ: ಎಚ್‌ಡಿಕೆ  ಮಾತಿಗೆ ಮೋದಿ ಮನ್ನಣೆ?

ಸಾರಾಂಶ

‘ಸ್ಥಳೀಯ ಕಬ್ಬಿಣ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

ನವದೆಹಲಿ (ಜ. 16): ‘ಸ್ಥಳೀಯ ಕಬ್ಬಿಣ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

‘ಉಕ್ಕು ಉತ್ಪಾದನೆಯಲ್ಲಿ ಬಳಸಲಾಗುವ ಅದಿರು ಆಮದು ಸುಂಕ ಹೆಚ್ಚಿಸುವ ಒತ್ತಾಯ ನಮ್ಮ ಪರಿಶೀಲನೆಯಲ್ಲಿದೆ. ವಿವಿಧ ಸಚಿವಾಲಯಗಳು ಇದನ್ನು ಪರಿಶೀಲಿಸುತ್ತಿವೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಮಂಗಳವಾರ ಹೇಳಿವೆ.

ಇತ್ತೀಚೆಗೆ ಕುಮಾರಸ್ವಾಮಿ ಅವರು ಮೋದಿ ಅವರಿಗೆ ಪತ್ರ ಬರೆದು, ‘ವಿದೇಶದಿಂದ ಆಮದಾಗುವ ಅದಿರನ್ನು ಉಕ್ಕು ಕಂಪನಿಗಳು ತರಿಸಿಕೊಳ್ಳುತ್ತಿರುವ ಕಾರಣ ದೇಶೀ ಅದಿರಿಗೆ ಬೆಲೆ ಇಲ್ಲವಾಗಿದೆ. ಹೀಗಾಗಿ ವಿದೇಶಿ ಅದಿರಿಗೆ ಸುಂಕ ಹೆಚ್ಚಿಸಿದರೆ ದೇಶೀ ಅದಿರಿಗೆ ಬೆಲೆ ಬರುತ್ತದೆ’ ಎಂದಿದ್ದರು. ಈಗ ವಿದೇಶೀ ಅದಿರಿಗೆ ಶೇ.2.5 ಸುಂಕವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Elon Musk : 'ಹಣದಿಂದ ಸಂತೋಷ ಖರೀದಿಸಲು ಸಾಧ್ಯವಿಲ್ಲ' 800 ಬಿಲಿಯನ್ ಡಾಲರ್ ಗಳಿಸಿದ ಶಾಕಿಂಗ್ ಪೋಸ್ಟ್!
Gadag Municipal Council ಗದಗ: ವರ್ಷ ಕಳೆದರೂ ಗದಗ ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ!