ಮಂಡ್ಯದಲ್ಲಿ ಭತ್ತದ ನಾಟಿ ಮಾಡಲಿದ್ದಾರೆ ಸಿಎಂ

By Web DeskFirst Published Aug 10, 2018, 8:32 AM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಮಂಡ್ಯದಲ್ಲಿ ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಲಿದ್ದಾರೆ. 

ಬೆಂಗಳೂರು :  ಮಳೆ ಅಭಾವದಿಂದ ಕಳೆದ ಮೂರು ವರ್ಷದಿಂದ ಮಂಡ್ಯದಲ್ಲಿ ಭತ್ತ ನಾಟಿ ಮಾಡಿರಲಿಲ್ಲ.

ಮೂರು ವರ್ಷಗಳ ಬಳಿಕ ಭತ್ತ ನಾಟಿ ಮಾಡುತ್ತಿದ್ದು, ಅವರೊಂದಿಗೆ ನಾನೂ ಸಂತಸ ಹಂಚಿಕೊಳ್ಳಲು ಶನಿವಾರ ಮಂಡ್ಯದಲ್ಲಿ ಭತ್ತ ನಾಟಿ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

3 ವರ್ಷದಿಂದ ತೊಗರಿ ಮತ್ತಿತರ ಬೆಳೆಗಳನ್ನು ಹಾಕುತ್ತಿದ್ದರು. ಇದೀಗ ವಿರಾಮದ ಬಳಿಕ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಿದೆ. ಹೀಗಾಗಿ ಕೆಲ ಕಾಲ ಅವರೊಂದಿಗೆ ಕಳೆಯುತ್ತೇನೆ ಎಂದರು.

click me!