
ರೈತರ ಸಾಲಮನ್ನಾ : ಇಂದು ಸಿಎಂ ಮಹತ್ವದ ತೀರ್ಮಾನ
ಬೆಂಗಳೂರು : ಸಾಲಮನ್ನಾ ಮಾಡುವ ವಿಚಾರವಾಗಿ ಇಂದು ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬ್ಯಾಂಕ್ ಮುಖ್ಯಸ್ಥರ ಜೊತೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ಸಾಲ ಮನ್ನಾ ವಿಚಾರವಾಗಿ ಸಹಕಾರ ಬ್ಯಾಂಕ್ ಗಳ ಮುಂದೆ ಕೆಲವೊಂದು ಪ್ರಸ್ತಾಪಗಳನ್ನು ಮುಂದಿಡುವ ಸಾಧ್ಯತೆ ಇದ್ದು, ಒಂದೇ ಹಂತದಲ್ಲಿ ಬಡ್ಡಿ ಪಾವತಿ ನಂತರ ವರ್ಷದೊಳಗೆ ಪಾವತಿಸಲು ಕಾಲಾವಕಾಶದ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಇದರ ಜೊತೆಯಲ್ಲೇ ಅಸಲು ಕಡಿತಗೊಳಿಸಲು ಬೇಡಿಕೆ ಮುಂದಿಡುವ ವಿಚಾರ ಕೂಡಾ ಪ್ರಸ್ತಾಪ ಮಾಡಲಿದ್ದು, ಅಲ್ಲದೇ ಎಷ್ಟು ಸಾಲ ವಿತರಣೆಯಾಗಿದೆ, ಎಷ್ಟು ಸಾಲ ತೀರುವಳಿಯಾಗಿದೆ, ಯಾವ್ಯಾವ ಬೆಳೆಗೆ ಯಾವ್ಯಾವ ಭಾಗದಲ್ಲಿ ಸಾಲ ವಿತರಣೆಯಾಗಿದೆ, ಎಷ್ಟು ಜನ ರೈತರು ಮರುಪಾವತಿಗೆ ಮುಂದೆ ಬಂದಿದ್ದಾರೆ ಎಂಬ ವಿಚಾರವಾಗಿ ಬ್ಯಾಂಕ್ ಗಳಿಂದ ವಿವರ ಪಡೆದುಕೊಳ್ಳಲಿದ್ದಾರೆ.
ಇನ್ನು ಸಾಲ ಮನ್ನಾ ಬಳಿಕ ಹಣವನ್ನು ಎರಡು ಅಥವಾ ಮೂರು ಹಂತದಲ್ಲಿ ಬ್ಯಾಂಕ್ ಗಳಿಗೆ ಸರ್ಕಾರದಿಂದ ಪಾವತಿ ಮಾಡುವ ಪ್ರಸ್ತಾಪವನ್ನು ಕೂಡಾ ಮುಂದಿರಿಸುವ ಸಾಧ್ಯತೆ ಇದೆ. ಅಲ್ಲದೇ ನೇರವಾಗಿ ರೈತರ ಖಾತೆಗೆ ಹಣ ಪಾವತಿಯಾಗುವ ನಿಟ್ಟಿನಲ್ಲಿ ಮೋಸಕ್ಕೆ ಆಸ್ಪದವಾಗದಂತೆ ಕ್ರಮ ವಹಿಸುವ ಬಗ್ಗೆಯೂ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.