
ಇಂಧೋರ್(ಜ.13): ಶಾಲಾ ಸಮಾರಂಭವೊಂದರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಅವರನ್ನು ಡಾಕು(ಡಕಾಯಿತ)ಎಂದು ಕರೆದಿದ್ದ ಮುಖ್ಯೋಪಾಧ್ಯಾಯರ ಅಮಾನತು ಆದೇಶವನ್ನು ಸ್ವತಃ ಕಮಲ್ನಾಥ್ ರದ್ದುಗೊಳಿಸಿದ್ದಾರೆ.
ಇಲ್ಲಿನ ಕನಿಷ್ಟ ಬುನಿಯಾದಿ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಮುಖೇಶ್ ತಿವಾರಿ, ಸಮಾರಂಭವೊಂದರಲ್ಲಿ ಸಿಎಂ ಕಮಲ್ನಾಥ್ ಅವರನ್ನು ಡಕಾಯಿತ ಎಂದು ಕರೆದಿದ್ದರು. ಮುಖ್ಯೋಪಾಧ್ಯಯರ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೇ ಜಿಲ್ಲಾಧಿಕಾರಿ ಛವ್ವಿ ಭಾರಧ್ವಾಜ್ ಪ್ರಿನ್ಸಿಪಾಲ್ ಮುಖೇಶ್ ತಿವಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಈ ಕುರಿತು ಮಾಹಿತಿ ಪಡೆದ ಸಿಎಂ ಕಮಲ್ನಾಥ್, ಮುಖೇಶ್ ತಿವಾರಿ ಅಮಾನತು ಆದೇಶವನ್ನು ರದ್ದುಗೊಳಿಸಿದರು. ಅಲ್ಲದೇ ಆ ಶಿಕ್ಷಕನನ್ನು ತಾವು ಕ್ಷಮಿಸಿರುವುದಾಗಿ ಕಮಲ್ನಾಥ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಸಾಂವಿಧಾನಿಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ಕುರಿತು ಹೇಳಿಕೆ ನೀಡುವುದಕ್ಕೂ ಮುಂಚೆ ಆ ಶಿಕ್ಷಕ ಒಮ್ಮೆ ಯೋಚಿಸಬೇಕಿತ್ತು. ಅದ್ಯಾಗ್ಯೂ ತಾವು ಅವರನ್ನು ಕ್ಷಮಿಸಿರುವುದಾಗಿ ಕಮಲ್ನಾಥ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.