
ಕಲಬುರಗಿ(ಮಾ.19): ದುಬಾರಿ ವಾಚ್ ಗಿಫ್ಟ್ ಪಡೆದು ಸಂಕಷ್ಟಕ್ಕೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಅದಾದ ಬಳಿಕ ಪಾಠ ಕಲಿತಿದ್ದಾರೆ. ಈಗ ಯಾರೇ ಗಿಫ್ಟ್ ಅಂದ್ರೆ ಸಾಕು ಸಿಎಂ ದೂರ ಸರಿದು ಬಿಡ್ತಾರೆ. ಇವತ್ತು ಕಲಬುರ್ಗಿಯಲ್ಲೂ ಆಗಿದ್ದು ಇದೇ. ಉತ್ತಮ ಬಜೆಟ್ ಗಾಗಿ ಸಿಎಂಗೇ ಗುಲ್ಬರ್ಗಾ ವಿವಿ ಚಿನ್ನದ ಪದಕ ನೀಡಲು ಮುಂದಾಯ್ತು.
ಸಚಿವ ರಾಯರೆಡ್ಡಿಯವರು ಚಿನ್ನದ ಪದಕ ನೀಡುತ್ತಲೇ ವೇದಿಕೆಯಲ್ಲಿಯೇ ಸಿಎಂ ಪದಕವನ್ನು ವಾಪಸ್ ನೀಡಿದರು. ವಿವಿ ನೀಡಿದ ಚಿನ್ನದ ಪದಕ ಮತ್ತು ಬೆಳ್ಳಿ ಆಕಳು ಎರಡನ್ನೂ ವಾಪಸ್ ನೀಡಿದ ಸಿಎಂ ಸಿದ್ದರಾಮಯ್ಯ. ಅದನ್ನು ನೆನಪಿಗಾಗಿ ವಿವಿಯಲ್ಲೇ ಇಡುವಂತೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.