ಸೇನೆಯೊಂದಿಗೆ ಘರ್ಷಣೆ: 3 ನಾಗರಿಕರು ಬಲಿ; 43 ಯೋಧರು, 20 ಪೊಲೀಸರಿಗೆ ಗಾಯ

Published : Mar 28, 2017, 10:45 AM ISTUpdated : Apr 11, 2018, 12:53 PM IST
ಸೇನೆಯೊಂದಿಗೆ ಘರ್ಷಣೆ: 3 ನಾಗರಿಕರು ಬಲಿ; 43 ಯೋಧರು, 20 ಪೊಲೀಸರಿಗೆ ಗಾಯ

ಸಾರಾಂಶ

ಸ್ಥಳೀಯರ ಆರಂಭಿಸಿದ ಕಲ್ಲು ತೂರಾಟದಿಂದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬಹಳ ತೊಂದರೆಯಾಯಿತು. ಒಂದು ಕಡೆ ಉಗ್ರ ವಿರುದ್ಧ ಹೋರಾಡುತ್ತಾ ಇನ್ನೊಂದು ಕಡೆ ಸ್ಥಳೀಯರ ಕಲ್ಲಗಳನ್ನು ಎದುರಿಸಬೇಕಾಯಿತು, ಎಂದು ಸಿಆರ್'ಪಿಎಫ್ ಡಿಐಜಿ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.

ಬುಡ್ಗಾಮ್, ಜಮ್ಮು & ಕಾಶ್ಮೀರ (ಮಾ.28): ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬುಡ್ಗಾಮ್'ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೇನೆ ಮತ್ತು ನಾಗರಿಕರ ನಡುವೆ ಘರ್ಷಣೆ ಉಂಟಾಗಿ ಮೂವರು ನಾಗರಿಕರು ಹತರಾಗಿದ್ದಾರೆ.

ಕಲ್ಲು ತೂರಾಟದಲ್ಲಿ 43 ಸಿಆರ್'ಪಿಎಫ್ ಯೋಧರು ಹಾಗೂ 20 ಪೊಲೀಸರು ಗಾಯಗೊಂಡಿದ್ದರೆ, ಸೇನಾ ಕಾರ್ಯಾಚರಣೆಯಲ್ಲಿ 17 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಸ್ಥಳೀಯರ ಆರಂಭಿಸಿದ ಕಲ್ಲು ತೂರಾಟದಿಂದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬಹಳ ತೊಂದರೆಯಾಯಿತು. ಒಂದು ಕಡೆ ಉಗ್ರರ ವಿರುದ್ಧ ಹೋರಾಡುತ್ತಾ ಇನ್ನೊಂದು ಕಡೆ ಸ್ಥಳೀಯರ ಕಲ್ಲುಗಳನ್ನು ಎದುರಿಸಬೇಕಾಯಿತು, ಎಂದು ಸಿಆರ್'ಪಿಎಫ್ ಡಿಐಜಿ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.

ಈ ರೀತಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಸ್ಥಳೀಯರು ಅಡ್ಡಿಪಡಿಸಬಾರದು ಎಂದು ಸಂಜಯ್ ಕುಮಾರ್ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಪಾಕಿಸ್ತಾನ ಕಾರಣ?

ಇಂದು ನಡೆದ ಸೇನೆ ಹಾಗೂ ನಾಗರಿಕರ ನಡುವಿನ ಘರ್ಷಣೆಯಲ್ಲಿ ಪಾಕಿಸ್ತಾನದ ಕೈವಾಡವಿದೆಯೆಂದು ಉನ್ನತ ಮೂಲಗಳು ತಿಳಿಸಿವೆಯೆಂದು ಏಎನ್'ಐ ವರದಿ ಮಾಡಿದೆ.   

(ಫೋಟೋ ಕೃಪೆ: ಏಎನ್ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೈಋತ್ಯ ರೈಲ್ವೆಯಲ್ಲಿ ವಂದೇ ಭಾರತ್ ಹವಾ, ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ, ಆದಾಯದಲ್ಲೂ ಚಾಕ್‌ಪಾಟ್‌!
ಮಾನವೀಯ ಸೇವೆಯ ಹೊಸ ಹೆಜ್ಜೆ.. ನೆಲಮಂಗಲದಲ್ಲಿ 'ನೆಮ್ಮದಿ' ಪ್ಯಾಲಿಯೇಟಿವ್ ಸೆಂಟರ್ ಶುಭಾರಂಭ