
ನವದೆಹಲಿ[ಡಿ.21]: ನಾಗರಿಕ ಸೇವೆ (ಸಿವಿಲ್ ಸರ್ವೀಸ್) ಪರೀಕ್ಷೆಗಳು ಹಾಗೂ ನೇಮಕಾತಿಯಲ್ಲಿ ವ್ಯಾಪಕ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನೀತಿ ಆಯೋಗ ಸಲಹೆಗಳನ್ನು ನೀಡಿದೆ.
ಐಎಎಸ್ನಂತಹ ನಾಗರಿಕ ಸೇವಾ ಹುದ್ದೆಗಳಿಗೆ ಸೇರಿಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಈಗ ಇರುವ ಗರಿಷ್ಠ ವಯೋಮಿತಿಯನ್ನು 30ರಿಂದ 27ಕ್ಕೆ ಇಳಿಸುವಂತೆ ನೀತಿ ಆಯೋಗವು ಸರ್ಕಾರಕ್ಕೆ ಸಲಹೆ ಮಾಡಿದೆ. 2022-23ರವರೆಗೆ ಹಂತಹಂತವಾಗಿ ಈ ಯೋಜನೆ ಜಾರಿಗೊಳಿಸುವಂತೆ ಅದು ಸಲಹೆ ನೀಡಿದೆ.
‘75 ವರ್ಷ ತುಂಬಲಿರುವ ಭಾರತಕ್ಕೆ ರಣನೀತಿ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿರುವ ನೀತಿ ಆಯೋಗ ಅದರಲ್ಲಿ ಈ ಅಂಶವನ್ನು ಒತ್ತಿ ಹೇಳಿದೆ.
ಇದೇ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ 60ಕ್ಕೂ ಹೆಚ್ಚು ಸಿವಿಲ್ ಸವೀರ್ಸ್ಗಳು ಇದ್ದು, ಅವುಗಳ ಸಂಖ್ಯೆ ಕಡಿಮೆಗೊಳಿಸುವಂತೆ ಕೂಡ ಅದು ಒತ್ತಾಯಿಸಿದೆ.
ನೇಮಕಗೊಂಡ ಅಭ್ಯರ್ಥಿಗಳನ್ನು ಮೊದಲು ಕೇಂದ್ರದ ಪಟ್ಟಿಯಲ್ಲಿ ಇರಿಸಬೇಕು. ಅವರ ಕ್ಷಮತೆಯನ್ನು ಆಧರಿಸಿ ಬೇರೆಬೇರೆ ಸೇವೆಗಳಿಗೆ ಹಂಚಬೇಕು. ಅಂತೆಯೇ ಸಿವಿಲ್ ಸವೀರ್ಸ್ ಪರೀಕ್ಷೆಗಳ ಸಂಖ್ಯೆಗಳನ್ನು ಇಳಿಸಿ ಎಲ್ಲವನ್ನೂ ಆಲ್-ಇಂಡಿಯಾ ರಾರಯಂಕಿಂಗ್ಗೆ ಒಳಪಡಿಸಬೇಕು. ರಾಜ್ಯಗಳು ಈ ಮೂಲಕವೇ ನೇಮಕ ಮಾಡಿಕೊಳ್ಳುವಂತೆ ಆಗಬೇಕು ಎಂದು ಅದು ಶಿಫಾರಸಿನಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ