
ಬಾಗಲಕೋಟೆ (ಡಿ.27): ಹೆಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಸಿಐಡಿ ತನಿಖೆ ಇಂದು ಸಹ ಬಾಗಲಕೋಟೆಯಲ್ಲಿ ಮುಂದುವರೆದಿದೆ.
ಸಿಐಡಿ ಡಿವೈಎಸ್’ಪಿ ರವಿಶಂಕರ್ ನೇತೃತ್ವದ ತಂಡ ನಿನ್ನೆಯಿಂದ ವಿಚಾರಣೆ ಶುರುಮಾಡಿದ್ದು, ಇಂದು ನವನಗರ ಪೊಲೀಸ್ ಠಾಣೆ ಮತ್ತು ಸರ್ಕಾರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕಿತ್ತು.
ಸಂತ್ರಸ್ತ ಮಹಿಳೆ ಡಿಸೆಂಬರ್ 17ರಂದು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣದ ಪ್ರಮುಖ ರೂವಾರಿ ಡಿಎಆರ್ ಪೇದೆ ಸುಭಾಸ್ ಮುಗಳಖೋಡ, ಸಿದ್ದಲಿಂಗ ಅಬಲಕಟ್ಟಿ, ಮಾರುತಿ ಮಿರಜಕರ್, ಅಶೋಕ ಲಾಗಲೋಟಿ ವಿರುದ್ದ ದೂರು ನೀಡಿದ್ದಳು.
ಜೀವಬೆದರಿಕೆ ಹಾಕಿ ಹೆಚ್.ವೈ.ಮೇಟಿ ವಿರುದ್ಧ ಹೇಳಿಕೆ ಕೊಡಿಸಲಾಗಿರುವ ಪ್ರಕರಣದ ಸಂಬಂಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಸಿಐಡಿ ವಿಚಾರಣೆ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.