
ಬೀಜಿಂಗ್(ಸೆ.06): ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಪತ್ರಕರ್ತೆಯೊಬ್ಬಳು ಹಿಂದಿಯಲ್ಲಿ ಮಾತನಾಡುತ್ತಾ ಭಾರತೀಯರ ಬಗ್ಗೆ ಅಪಾರ ಕಾಳಜಿವಹಿಸಿ ಮಾತನಾಡುತ್ತಿದ್ದಳು. ಇದನ್ನ ಗಮನಿಸಿದ ಸುದ್ದಿಸಂಸ್ಥೆಯೊಂದು ತಾಂಗ್ ಯುಂಗೈ ಸಂದರ್ಶನ ಮಾಡಿದರು.
ಸಂದರ್ಶನದಲ್ಲಿ ಪತ್ರಕರ್ತೆ ತಾಂಗ್ 'ಯುಂಗೈ ಗಡಿ ವಿವಾದ ದೊಡ್ಡ ವಿವಾದವೇನೂ ಅಲ್ಲ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೇಲೆ ವಿಶ್ವಾಸವಿದೆ. ಖಂಡಿತಾ ಬ್ರಿಕ್ಸ್ ಸಮಾವೇಶದ ವೇಳೆ ಡೊಕ್ಲಾಂ ಗಡಿ ವಿವಾದವನ್ನು ಬಗೆ ಹರಿಸುತ್ತಾರೆ' ಅಂತ ಸ್ಪಷ್ಟಪಡಿಸಿದಳು.
ಇದೇ ವೇಳೆ ಹಿಂದಿಯ ನೂರಿ ಚಿತ್ರದ "ಆ ಜಾರೇ" ಚಿತ್ರಗೀತೆಯನ್ನು ಹಾಡಿ ಭಾರತೀಯರಿಗೆ ಕೈ ಮುಗಿದು ನಮಸ್ತೆ ಎಂದೂ ಹೇಳಿದ್ದಾರೆ. ಅಲ್ಲದೇ ಈಕೆ ನಿಗರ್ಗಳವಾಗಿ ಹಿಂದಿ ಭಾಷೆಯಬನ್ನು ಮಾತನಾಡುತ್ತಾಳೆ ಎಂಬುವುದು ಮತ್ತೊಂದು ವಿಶೇಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.