ಯಾರೇ ದಾಳಿ ಮಾಡಿದರೂ ಸೋಲಿಸುತ್ತೇವೆ: ಚೀನಾ ಪ್ರತಾಪ

Published : Jul 30, 2017, 03:15 PM ISTUpdated : Apr 11, 2018, 12:54 PM IST
ಯಾರೇ ದಾಳಿ ಮಾಡಿದರೂ ಸೋಲಿಸುತ್ತೇವೆ: ಚೀನಾ ಪ್ರತಾಪ

ಸಾರಾಂಶ

"ಬಲಿಷ್ಠ ಮಿಲಿಟರಿ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯುವ ಸಾಮರ್ಥ್ಯ ನಮ್ಮ ಸೇನೆಗಿದೆ. ಚೀನೀ ರಾಷ್ಟ್ರಕ್ಕೆ ಅದ್ಭುತ ನವಚೈತನ್ಯ ತುಂಬ ಮತ್ತು ವಿಶ್ವಶಾಂತಿ ಕಾಪಾಡುವ ನಮ್ಮ ಕನಸನ್ನು ಸಾಕಾರಗೊಳಿಸುವ ವಿಶ್ವಾಸ ನಮ್ಮ ಸೇನೆಗಿದೆ"

ಬೀಜಿಂಗ್(ಜುಲೈ 30): ದೇಶದ ಮೇಲೆ ಯಾವುದೇ ಶತ್ರು ದಾಳಿ ಮಾಡಿದರೂ ಸೋಲಿಸುವಷ್ಟು ಚೀನಾ ಸಮರ್ಥವಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸೀ ಜಿನ್'ಪಿಂಗ್ ಹೇಳಿದ್ದಾರೆ. ಎಷ್ಟೇ ಸೇನೆಗಳು ಹರಿಹಾಯ್ದು ಬಂದರೂ ಚೀನಾದ ಪಿಎಲ್'ಎ ಸೇನೆಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಎದೆಯುಬ್ಬಿಸಿ ಹೇಳಿದ್ದಾರೆ.

ಪೀಪಲ್ಸ್ ಲಿಬರೇಶನ್ ಆರ್ಮಿಯ 90ನೇ ಸಂಸ್ಥಾಪನಾ ದಿನದಂದು ನಡೆದ ಬೃಹತ್ ಮಿಲಿಟರಿ ಪೆರೇಡ್ ವೇಳೆ ಚೀನಾ ಅಧ್ಯಕ್ಷರು ಮಾತನಾಡುತ್ತಿದ್ದರು. ಚೀನಾ ಸೇನೆಯ ಪರಮೋಚ್ಚ ಕಮಾಂಡರ್ ಆಗಿರುವ ಅಧ್ಯಕ್ಷರು, ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಅಭಿವೃದ್ಧಿಯನ್ನು ಕಾಪಾಡುವಷ್ಟು ಆತ್ಮವಿಶ್ವಾಸ ಸೇನೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಹಳ ಚುಟುಕಾಗಿ 10 ನಿಮಿಷ ಭಾಷಣ ಮಾಡಿದ ಕ್ಸೀ ಜಿನ್'ಪಿಂಗ್ ಅವರು, "ಬಲಿಷ್ಠ ಮಿಲಿಟರಿ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯುವ ಸಾಮರ್ಥ್ಯ ನಮ್ಮ ಸೇನೆಗಿದೆ. ಚೀನೀ ರಾಷ್ಟ್ರಕ್ಕೆ ಅದ್ಭುತ ನವಚೈತನ್ಯ ತುಂಬ ಮತ್ತು ವಿಶ್ವಶಾಂತಿ ಕಾಪಾಡುವ ನಮ್ಮ ಕನಸನ್ನು ಸಾಕಾರಗೊಳಿಸುವ ವಿಶ್ವಾಸ ನಮ್ಮ ಸೇನೆಗಿದೆ" ಎಂದು ಹೇಳಿದ್ದಾರೆ. ಇದೇ ವೇಳೆ, ಅವರು ದೇಶದ ಕಮ್ಯೂನಿಸ್ಟ್ ಸರಕಾರ ಹೇಳುವುದನ್ನು ಸೇನೆ ಶಿರಸಾವಹಿಸಿ ಮಾಡಬೇಕು. ಎಲ್ಲಿ ಬೆರಳು ತೋರಿಸುತ್ತೋ ಅಲ್ಲಿಗೆ ಹೋಗಿ ಡ್ಯೂಟಿ ಮಾಡಬೇಕು ಎಂದೂ ಚೀನೀ ಅಧ್ಯಕ್ಷರು ಸೇನೆಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಚೀನಾದ ಸೇನೆಯಲ್ಲಿ 23 ಲಕ್ಷ ಆನ್'ಡ್ಯೂಟಿ ಯೋಧರಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿ ವಿಶ್ವದ ಅತೀ ದೊಡ್ಡ ಸೇನೆ ಎನಿಸಿದೆ. ಇದರ ಡಿಫೆನ್ಸ್ ಬಜೆಟ್ 152 ಬಿಲಿಯನ್ ಡಾಲರ್, ಅಂದರೆ 9 ಲಕ್ಷ ಕೋಟಿ ರೂಪಾಯಿಗೂ ಅಧಿಕವಿದೆ. ಅಮೆರಿಕ ಬಿಟ್ಟರೆ ಚೀನಾ ದೇಶವೇ ಸೇನೆಗೆ ಅತೀ ಹೆಚ್ಚು ವೆಚ್ಚ ಮಾಡುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?
ಸರ್ಪದೋಷ ಪರಿಹಾರಕ್ಕೆ 'ಹಾವಿನಂತೆ ಹುಟ್ಟಿದ್ದ' 7 ತಿಂಗಳ ಮಗಳನ್ನು ಕೊಂದಿದ್ದ ಅಮ್ಮ, ಮರಣದಂಡನೆ ಶಿಕ್ಷೆ ರದ್ದು ಮಾಡಿದ ಕೋರ್ಟ್‌!