ನಾಯ್ಡು ಅಮರಾವತಿ ಕನಸಿಗೆ ತಣ್ಣೀರೆರಚಿದ ಚೀನಾ ಬ್ಯಾಂಕ್

Published : Jul 24, 2019, 11:17 AM ISTUpdated : Jul 24, 2019, 11:23 AM IST
ನಾಯ್ಡು ಅಮರಾವತಿ ಕನಸಿಗೆ ತಣ್ಣೀರೆರಚಿದ ಚೀನಾ ಬ್ಯಾಂಕ್

ಸಾರಾಂಶ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದೀಗ ಎಲ್ಲಿಂದಲೂ ಸಹಾಯ ಸಿಗದ ಸ್ಥಿತಿ ಎದುರಾಗಿದೆ. 

ನವದೆಹಲಿ [ಜು.24]: ಆಂಧ್ರಪ್ರದೇಶದ ಅಮರಾವತಿಯಲ್ಲಿ ಅತ್ಯಾಧುನಿಕ ಹಾಗೂ ಭವ್ಯವಾದ ರಾಜಧಾನಿ ನಿರ್ಮಿಸುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕನಸಿಗೆ ಮತ್ತೊಂದು ಹೊಡೆತ ಬಿದ್ದಿದೆ. ಅಮರಾವತಿ ರಾಜಧಾನಿ ನಿರ್ಮಾಣ ಯೋಜನೆಗೆ 1300 ಕೋಟಿ ರು. ಸಾಲ ನೀಡಲು ಒಪ್ಪಿದ್ದ ಚೀನಾ ಬೆಂಬಲಿತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ ಇದೀಗ ಆ ಪ್ರಸ್ತಾವದಿಂದ ಹಿಂದೆ ಸರಿದಿದೆ.

 ಆ ಯೋಜನೆಯ ಪ್ರಸ್ತಾವ ತಮ್ಮ ಪರಿಗಣನೆಯಲ್ಲಿ ಇಲ್ಲ ಎಂದು ಆ ಬ್ಯಾಂಕಿನ ವಕ್ತಾರರು ತಿಳಿಸಿದ್ದಾರೆ. 2000 ಕೋಟಿ ರು. ಸಾಲ ನೀಡುವ ಪ್ರಸ್ತಾವವನ್ನು ಕಳೆದ ವಾರವಷ್ಟೇ ವಿಶ್ವ ಬ್ಯಾಂಕ್‌ ಕೈಬಿಟ್ಟಿತ್ತು. 

ಅದರ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಅಮರಾವತಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟುದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ಕೈಗೊಳ್ಳಲು ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಲು ವಿಶ್ವ ಬ್ಯಾಂಕ್‌ ಮುಂದಾಗಿತ್ತು. ಅದಕ್ಕೆ ಭಾರತ ಒಪ್ಪಿಗೆ ಸೂಚಿಸಿರಲಿಲ್ಲ. ಬದಲಿಗೆ ಸಾಲದ ಕೋರಿಕೆಯನ್ನೇ ಹಿಂಪಡೆದಿತ್ತು. ಹೀಗಾಗಿ ವಿಶ್ವ ಬ್ಯಾಂಕ್‌ ತನ್ನ ಪ್ರಸ್ತಾವ ಕೈಬಿಟ್ಟಿತ್ತು. ಈಗ ಚೀನಾ ಬ್ಯಾಂಕಿನ ಪ್ರಕಟಣೆಗೂ ಅದೇ ಕಾರಣ ಇರಬಹುದು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು