
ಶಬರಿಮಲೆ (ಡಿ.10): ಕೇರಳದ ಶಬರಿ ಮಲೆಯಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ನಡೆಯುವ ಮಕರ ಬೆಳಕು ವೀಕ್ಷಣೆಗೆ ನೆರೆಯುವ ಲಕ್ಷಾಂತರ ಮಂದಿಯ ನಡುವೆ ಮಕ್ಕಳು ಕಳೆದು ಹೋಗುವುದು ನಡೆಯುತ್ತಿರುತ್ತದೆ.
ಈ ಸಂದರ್ಭದಲ್ಲಿ ಮಕ್ಕಳು ನಾಪತ್ತೆಯಾದಲ್ಲಿ ಪತ್ತೆಹಚ್ಚಲು ನೆರವಾಗುವುದಕ್ಕೆ ರೇಡಿಯೋ ಫ್ರೀಕ್ವೆನ್ಸಿ ಗುರುತು ಟ್ಯಾಗ್'ಗಳನ್ನು ಅಳವಡಿಸುವ ಯೋಜನೆ ಇದೀಗ ಸಿದ್ಧವಾಗಿದೆ. ಕೇರಳ ಪೊಲೀಸ್ ಮತ್ತು ವೊಡಾ ಫೋನ್ ಜಂಟಿ ಯೋಜನೆಯನ್ನು ರೂಪಿಸಿದೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಕುತ್ತಿಗೆಗೆ ಟ್ಯಾಗ್ ಅಳವಡಿಸಲಾಗುತ್ತದೆ. ಬಳಿಕ ಇದನ್ನು ಹಿಂದಿರುಗಿಸುವವರೆಗೂ ಅವರು ಇರುವ ಸ್ಥಳವನ್ನು ಗುರುತಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.