
ಚಿಕ್ಕಮಗಳೂರು: ‘ನಿಮಗೆ ವರ್ಗಾವಣೆ ಬೇಕೆ? ಹಾಗಿದ್ದರೆ ನಿಮ್ಮ ದೇಹದ ತೂಕ ಇಳಿಸಿಕೊಂಡು ಬನ್ನಿ. ತೂಕ ಕಡಿಮೆಯಾದರೆ ನೀವು ಕೇಳುವ ಸ್ಥಳಕ್ಕೆ ವರ್ಗಾವಣೆ ನೀಡಲಾ ಗುವುದು' ಎಂದು ಜಿಲ್ಲಾರಕ್ಷಣಾಧಿಕಾರಿ ಕೆ. ಅಣ್ಣಾಮಲೈ ಜಾರಿಗೆ ತಂದಿದ್ದ ಯೋಜನೆ ಯಶಸ್ವಿಯಾಗಿದೆ.
ಪೊಲೀಸ್ ಸಿಬ್ಬಂದಿ ತಮ್ಮ ದೇಹದ ತೂಕವನ್ನು ಹಾಲಿ ಇರುವ ತೂಕಕ್ಕಿಂತ ಕನಿಷ್ಠ 5 ಕೆ.ಜಿ. ಕಡಿಮೆ ಮಾಡಿಕೊಂಡರೆ ಅಂತಹವರಿಗೆ ಅವರು ಕೇಳುವ ಠಾಣೆಗೆ ವರ್ಗಾವಣೆ ಮಾಡಿಕೊಡಲಾಗುವುದೆಂದು ಜ.13 ರಂದು ಎಸ್ಪಿ ಅಣ್ಣಾಮಲೈ ಘೋಷಿಸಿದ್ದರು. ತೂಕ ಇಳಿಸಿಕೊಳ್ಳುವ ಯೋಜನೆಗೆ 34 ಮಂದಿ ಹೆಸರು ನೋಂದಾಯಿಸಿದ್ದರು. ಆ ಪೈಕಿ 16 ಮಂದಿ ತೂಕ ಇಳಿಸಿಕೊಂ ಡಿದ್ದಾರೆ. ಅಂಥವರಿಗೆ ಅವರು ಕೇಳಿದ ಕಡೆಗೆ ವರ್ಗಾವಣೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.