ನಾಯಿ ತಿನ್ನಲು ಹೋಗಿ ಬಾತ್ ರೂಂಗೆ ಬಿದ್ದ ಚಿರತೆ

Published : Jan 17, 2017, 04:50 AM ISTUpdated : Apr 11, 2018, 01:05 PM IST
ನಾಯಿ ತಿನ್ನಲು ಹೋಗಿ ಬಾತ್ ರೂಂಗೆ ಬಿದ್ದ ಚಿರತೆ

ಸಾರಾಂಶ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡ್ಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 2.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗುಡ್ಡಹಳ್ಳಿಯ ರೈತ ಗಂಗಣ್ಣ ಎಂಬುವರ ನಾಯಿಗಳು ಚಿರತೆ ಬಂದಿದ್ದನ್ನು ನೋಡಿ ಬೊಗಳಲು ಶುರು ಮಾಡಿವೆ. ಈ ವೇಳೆ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದ್ದು ಚಿರತೆಯಿಂದ ಪಾರಾಗಲು ನಾಯಿ ಸೀದಾ ಬಚ್ಚಲು ಮನೆಗೆ ಓಡಿದೆ.

ರಾಮನಗರ(ಜ.17): ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸಾಕು ನಾಯಿ ತಿನ್ನಲು ಹೋಗಿ ಬಾತ್ ರೂಂಗೆ ಬಿದ್ದು, ಸೆರೆ ಸಿಕ್ಕಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡ್ಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 2.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗುಡ್ಡಹಳ್ಳಿಯ ರೈತ ಗಂಗಣ್ಣ ಎಂಬುವರ ನಾಯಿಗಳು ಚಿರತೆ ಬಂದಿದ್ದನ್ನು ನೋಡಿ ಬೊಗಳಲು ಶುರು ಮಾಡಿವೆ. ಈ ವೇಳೆ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದ್ದು ಚಿರತೆಯಿಂದ ಪಾರಾಗಲು ನಾಯಿ ಸೀದಾ ಬಚ್ಚಲು ಮನೆಗೆ ಓಡಿದೆ.

ಈ ದೃಶ್ಯ ಕಂಡ ರೈತ ಗಂಗಣ್ಣ ಹೊರಗಿನಿಂದ ಬಚ್ಚಲುಮನೆಯ ಬಾಗಿಲು ಹಾಕಿದ್ದಾರೆ. ಹೀಗಾಗಿ ಚಿರತೆ ಸೆರೆಯಾಗಿದೆ. ಬಳಿಕ ರೈತ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!