ಶೀಘ್ರ ಇಡೀ ಬಿಜೆಪಿ ತಿರಸ್ಕಾರವಾಗಲಿದೆ

Published : Apr 07, 2018, 10:47 AM ISTUpdated : Apr 14, 2018, 01:13 PM IST
ಶೀಘ್ರ ಇಡೀ ಬಿಜೆಪಿ ತಿರಸ್ಕಾರವಾಗಲಿದೆ

ಸಾರಾಂಶ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿ ಎಂದು ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಂಸದರಿಗೆ ಕರೆ ನೀಡಿದ್ದಾರೆ.

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿ ಎಂದು ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಂಸದರಿಗೆ ಕರೆ ನೀಡಿದ್ದಾರೆ.

ಶೀಘ್ರದಲ್ಲೇ ಇಡೀ ದೇಶದಲ್ಲಿ ಬಿಜೆಪಿ ತಿರಸ್ಕರಿಸಲ್ಪಡಲಿದೆ ಎಂದು ನಾಯ್ಡು ಭವಿಷ್ಯ ನುಡಿದಿದ್ದಾರೆ. ಟಿಡಿಪಿ ಸಂಸದರೊಂದಿಗೆ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡಿದ ನಾಯ್ಡು, ‘ಕೆಲವು ದಿನಗಳಿಂದ ಸಂಸತ್‌ ಕಲಾಪ ಪದೇಪದೇ ಮುಂದೂಡುವ ಮೂಲಕ ಬಿಜೆಪಿ ನುಣುಚಿಕೊಳ್ಳುತ್ತಿದೆ. ಸಂಸತ್ತು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟರೆ, ಸಂಸದರು ರಾಷ್ಟ್ರಪತಿಯವರನ್ನು ಭೇಟಿಯಾಗಬೇಕು. ಬಿಜೆಪಿ, ವಿಭಜಿಸಿ ಆಳುವ ನೀತಿಯನ್ವಯ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಇನ್ನೊಂದೆಡೆಯಲ್ಲಿ ಶುಕ್ರವಾರ ಮುಂಜಾನೆ ಅಮರಾವತಿಯಲ್ಲಿ ನಾಯ್ಡು ಟಿಡಿಪಿ ಸಚಿವರು ಮತ್ತು ಮುಖಂಡರೊಂದಿಗೆ ಸೈಕಲ್‌ ರ್ಯಾಲಿ ನಡೆಸಿದರು. ‘ಈಗಾಗಲೇ ಆಂಧ್ರ ಪ್ರದೇಶದ ಜನತೆ ಬಿಜೆಪಿಯನ್ನು ಸ್ವೀಕರಿಸುತ್ತಿಲ್ಲ. ಶೀಘ್ರವೇ ಇಡೀ ದೇಶದಲ್ಲೇ ಬಿಜೆಪಿಯನ್ನು ಸ್ವೀಕರಿಸದಂತಹ ದಿನ ಬರಲಿದೆ.

ವಿಶೇಷ ಮಾನ್ಯತೆ ಸ್ಥಾನಮಾನ ಮತ್ತು ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆ ಸೇರಿದಂತೆ ರಾಜ್ಯಸಭೆಯಲ್ಲಿ ನೀಡಲಾದ ಭರವಸೆಗಳು ಈಡೇರುವವರೆಗೂ ನಾವು ಹಿಮ್ಮೆಟ್ಟುವುದಿಲ್ಲ’ ಎಂದು ನಾಯ್ಡು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ