ಕೇಂದ್ರವು ಕಾವೇರಿ ವಿಚಾರದಲ್ಲಿ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ‌ ನೋಡಿ

Published : Oct 02, 2016, 12:10 PM ISTUpdated : Apr 11, 2018, 01:00 PM IST
ಕೇಂದ್ರವು ಕಾವೇರಿ ವಿಚಾರದಲ್ಲಿ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ‌ ನೋಡಿ

ಸಾರಾಂಶ

ಬೆಂಗಳೂರು(ಅ.2): ಕೇಂದ್ರವು  ಕಾವೇರಿ ವಿಚಾರದಲ್ಲಿ ಮುಂದೆ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ‌ ನೋಡಿ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬಾರದೆಂದು ಪ್ರಧಾನಿ ಬಳಿ ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ. ಕಾವೇರಿ ಮಂಡಳಿ ರಚಿಸದಂತೆ ನಾವೂ ಕೋರ್ಟ್​ಗೆ ತಿಳಿಸಿದ್ದೆವು. ನಾನು ಕೇಂದ್ರ ಕಾನೂನು ಸಚಿವನಾಗಿದ್ದಾಗಲೂ ಕೋರ್ಟ್​ಗೆ ತಿಳಿಸಲಾಗಿತ್ತು.

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ. ಕಾವೇರಿ ನೀರು ನಿರ್ವಹಣ ಮಂಡಳಿ ರಚಿಸದಂತೆ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಹೇಳಿದ್ದೆವು.  ರಾಜ್ಯ ನೀರಾವರಿ ಸಚಿವರ‌ ಜೊತೆ ಕೂಡ ಮಾತುಕತೆ ನಡೆಸಿ ಇದೇ ವಿಚಾರ ತಿಳಿಸಿದ್ದೆ.  ಕಾವೇರಿ ಕುರಿತು ಎಲ್ಲ ಮಾಧ್ಯಮಗಳ ಮುಂದೆ ಹೇಳಿದರೆ ತೂಕ ಹೆಚ್ಚು ಅಂದುಕೊಳ್ಳುತ್ತಾರೆ. ಮುಂದೆ ಕೇಂದ್ರ ಸರ್ಕಾರ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ‌ ನೋಡಿ ಎಂದು ಕೇಂದ್ರ ಸಚಿವರು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!