ಗೂಗಲ್ ಜಿ ಬೋರ್ಡ್'ನಲ್ಲಿ ಕರಾವಳಿಯ ತುಳು ಭಾಷೆ!

Published : Nov 19, 2017, 01:11 PM ISTUpdated : Apr 11, 2018, 01:03 PM IST
ಗೂಗಲ್ ಜಿ ಬೋರ್ಡ್'ನಲ್ಲಿ ಕರಾವಳಿಯ ತುಳು ಭಾಷೆ!

ಸಾರಾಂಶ

ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಈಗ ಬರೆಯಲು ಸಾಧ್ಯವಿದೆ. ಮುಖ್ಯವಾಗಿ ಆ್ಯಂಡ್ರಾಯ್ಡ್ ಮೊಬೈಲ್ ಹಾಗೂ ಕಂಪ್ಯೂಟರ್‌'ಗಳಲ್ಲಿ ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ಕನ್ನಡ ಅಕ್ಷರದಲ್ಲಿ ತುಳು ಭಾಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು(ನ.19) ಕರಾವಳಿಯಲ್ಲಿ ನೆಲದ ಪ್ರಮುಖ ಭಾಷೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ಜಾಗತಿಕ ವೆಬ್ ತಾಣ ಗೂಗಲ್ ತುಳು ಭಾಷೆಗೆ ಸ್ಥಾನ ನೀಡಿದೆ. ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಈಗ ಬರೆಯಲು ಸಾಧ್ಯವಿದೆ. ಮುಖ್ಯವಾಗಿ ಆ್ಯಂಡ್ರಾಯ್ಡ್ ಮೊಬೈಲ್ ಹಾಗೂ ಕಂಪ್ಯೂಟರ್‌'ಗಳಲ್ಲಿ ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ಕನ್ನಡ ಅಕ್ಷರದಲ್ಲಿ ತುಳು ಭಾಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಮೂಲಕ ಇತರೆ ಪ್ರಾದೇಶಿಕ ಭಾಷೆಗಳ ಸಾಲಿನಲ್ಲಿ ತುಳುವಿಗೂ ಗೂಗಲ್ ಪ್ರಾಮುಖ್ಯತೆಯನ್ನು ನೀಡಿದೆ. ಗೂಗಲ್‌'ನಲ್ಲಿ ಗೂಗಲ್ ಜಿ ಬೋರ್ಡ್‌'ನ್ನು ಕ್ಲಿಕ್ ಮಾಡಿದ ಬಳಿಕ ಆಪ್ಶನ್‌'ನಲ್ಲಿ ಹಲವು ಭಾಷೆಗಳ ಸಾಲಿನಲ್ಲಿ ತುಳುವಿನ ಹೆಸರಿದೆ. ತುಳು ಭಾಷೆಗೆ ಕ್ಲಿಕ್ ಮಾಡಿದರೆ, ಅಲ್ಲಿ ಕನ್ನಡ ಅಕ್ಷರದಲ್ಲಿ ತುಳುವಿನ ಮಾತುಗಳನ್ನು ಬರೆಯಬಹುದು. ಹೀಗೆ ಬರೆಯುತ್ತಾ ಹೋದಂತೆ ತುಳುವಿನ ವಾಕ್ಯವನ್ನು ಊಹಿಸುವ(ಪ್ರಿಡಿಕ್ಷನ್)ಪದಗಳು ಮೊದಲೇ ಟೈಪಿಸುತ್ತವೆ. ಪ್ರಸ್ತುತ ತುಳುವರು ಹಾಗೂ ತುಳು ಭಾಷಾ ಅಭಿಮಾನಿಗಳು, ಕನ್ನಡ ಲಿಪಿಯಲ್ಲಿ ತುಳು ಭಾಷೆಯನ್ನು ಬರೆಯುತ್ತಿದ್ದರು.

ಆದರೆ ಪ್ರಿಡಿಕ್ಷನ್‌'ಗಳು ಲಭ್ಯವಿರುತ್ತಿರಲಿಲ್ಲ. ಆದರೆ ಈಗ ಪ್ರಿಡಿಕ್ಷನ್‌ಗಳು ಕನ್ನಡದಂತೆಯೇ ಟೈಪಿಸುತ್ತವೆ. ಇದು ತುಳು ಭಾಷೆಯ ಸಂದೇಶವನ್ನು ಸುಲಭವಾಗಿ ಟೈಪ್ಮಾಡಿ ಕಳುಹಿಸಲು ಅನುಕೂಲವಾಗಲಿದೆ. ಕಳೆದ ಒಂದು ತಿಂಗಳಿನಿಂದ ಗೂಗಲ್‌'ನಲ್ಲಿ ಈ ಸೌಲಭ್ಯ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತುಳು ಭಾಷೆಯ ಲಿಪಿ ಇನ್ನೂ ಅಂತಿಮವಾಗಿಲ್ಲ. ಬಳಿಕ ತುಳು ಲಿಪಿಯನ್ನು ಯುನಿಕೋಡ್‌'ಗೆ ಅಳವಡಿಸಬೇಕು. ಬಳಿಕವಷ್ಟೆ ತುಳು ಲಿಪಿ ಅಂತರ್ಜಾಲದಲ್ಲಿ ಬಳಕೆಯಾಗಲು ಸಾಧ್ಯವಿದೆ. ಗೂಗಲ್ ಬಳಕೆಗೆ ತಂದಿರುವುದು ಕೀ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಕನ್ನಡದಲ್ಲಿ ಟೈಪ್ ಮಾಡುವುದನ್ನು. ಇದು ಮುಂದೆ ಯುನಿಕೋಡ್‌'ನಲ್ಲಿ ತುಳು ಲಿಪಿ ಅನುಷ್ಠಾನಕ್ಕೆ ಪೂರಕವಾಗಲಿದೆ ಎನ್ನುತ್ತಾರೆ ಗಣಕ ತಜ್ಞ ಯು.ಬಿ.ಪವನಜ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ