ಪಿಯೂಷ್ ಏಕೆ ದೇವೇಗೌಡ್ರನ್ನು ಹೊಗಳ್ತಿದ್ದಾರೆ? ಕುತೂಹಲ ಕೆರಳಿಸಿದೆ ಇಬ್ಬರ ಮಾತುಕತೆ

Published : Jan 09, 2018, 12:27 PM ISTUpdated : Apr 11, 2018, 12:54 PM IST
ಪಿಯೂಷ್ ಏಕೆ ದೇವೇಗೌಡ್ರನ್ನು ಹೊಗಳ್ತಿದ್ದಾರೆ? ಕುತೂಹಲ ಕೆರಳಿಸಿದೆ ಇಬ್ಬರ ಮಾತುಕತೆ

ಸಾರಾಂಶ

ಪೀಯೂಷ್ ಮತ್ತು ದೇವೇಗೌಡರು  ಕಳೆದ ವಾರ ಹಾಸನದ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ದೇವೇಗೌಡರು ಪೀಯೂಷ್ ಗೋಯಲ್ ಬಳಿ ಸಮಯ ಕೇಳಿದಾಗ ‘ಅಯ್ಯೋ ನೀವು ಹೇಳಿದಲ್ಲಿಗೆ ನಾನು ಬರುತ್ತೇನೆ’ ಎಂದು ಪೀಯೂಷ್ ಗೋಯಲ್ ಅವರೇ ದೇವೇಗೌಡರ ಮನೆಗೆ ಬಂದು ಅರ್ಧ ಗಂಟೆ ಮಾತನಾಡಿಸಿ ಹೋಗಿದ್ದಾರೆ.

ನವದೆಹಲಿ (ಜ.09): ಪೀಯೂಷ್ ಮತ್ತು ದೇವೇಗೌಡರು  ಕಳೆದ ವಾರ ಹಾಸನದ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ದೇವೇಗೌಡರು ಪೀಯೂಷ್ ಗೋಯಲ್ ಬಳಿ ಸಮಯ ಕೇಳಿದಾಗ ‘ಅಯ್ಯೋ ನೀವು ಹೇಳಿದಲ್ಲಿಗೆ ನಾನು ಬರುತ್ತೇನೆ’ ಎಂದು ಪೀಯೂಷ್ ಗೋಯಲ್ ಅವರೇ ದೇವೇಗೌಡರ ಮನೆಗೆ ಬಂದು ಅರ್ಧ ಗಂಟೆ ಮಾತನಾಡಿಸಿ ಹೋಗಿದ್ದಾರೆ.

ಮೊದಲಿನ ಹತ್ತು ನಿಮಿಷದ ನಂತರ ನಿಮ್ಮ ಜೊತೆ ಪರ್ಸನಲ್ ಆಗಿ ಮಾತನಾಡಬೇಕು ಎಂದು ರೇವಣ್ಣ ಅವರನ್ನು ಹೊರಗೆ ಕಳುಹಿಸಿದ ಪೀಯೂಷ್ ಗೋಯಲ್ ದೇವೇಗೌಡರ ಜೊತೆ ಒನ್ ಟು ಒನ್ ಮಾತನಾಡಿದ್ದಾರೆ. ಅದೇನು ಮಾತನಾಡಿಕೊಂಡರೋ ಗೊತ್ತಿಲ್ಲ. ಆದರೆ ದೇವೇಗೌಡ ಬಹಳ ದೊಡ್ಡ ನಾಯಕ ಎಂದು ಪೀಯೂಷ್ ಮಾತ್ರ ಬಹಳ ಖುಷಿಯಿಂದ ಪತ್ರಕರ್ತರ ಎದುರು ಮಾತನಾಡುತ್ತಿದ್ದಾರೆ. ಅಂದ ಹಾಗೆ ಇದೇ ಪೀಯೂಷ್ ಗೋಯಲ್ ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟೈಮ್ ಕೊಟ್ಟು ಕೂಡ ಭೇಟಿ ಆಗಿರಲಿಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಫೋನ್ ಮೇಲೆ ಫೋನ್ ಮಾಡಿದರೂ ವಾಪಸ್ ಫೋನ್ ಮಾಡುವ ಸೌಜನ್ಯ ಕೂಡ ತೋರಿಸಿರಲಿಲ್ಲ. ಆದರೆ ಅತಂತ್ರ ವಿಧಾನಸಭೆ ಸಾಧ್ಯತೆಗಳು ಗೋಚರಿಸುತ್ತಿರುವಾಗ ಪೀಯೂಷ್ ಗೋಯಲ್ ಸುಮ್ಮನೆ ದೇವೇಗೌಡರ ಮನೆಗೆ ಬಂದು ಬರೀ ಚಹಾ ಕುಡಿದು ಹೋಗಿದ್ದಾರೆ ಎಂದರೆ ನಂಬುವುದು ಕಷ್ಟ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ