ಕಲ್ಲಿದ್ದಲು ಹಗರಣ ಅಂತಿಮ ವರದಿ ರೆಡಿ

Published : Jan 14, 2017, 06:40 AM ISTUpdated : Apr 11, 2018, 01:04 PM IST
ಕಲ್ಲಿದ್ದಲು ಹಗರಣ ಅಂತಿಮ ವರದಿ ರೆಡಿ

ಸಾರಾಂಶ

ಸಿಬಿಐ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳ ಪಟ್ಟಿ ಮತ್ತು ಅವರ ಹೇಳಿಕೆಗಳನ್ನು ರೆಕಾರ್ಡ್ ಮಾಡಿ ಸಲ್ಲಿಸಲಾಗಿದೆ. ಸಿಬಿಐ ವರದಿ ಸಲ್ಲಿಸಲು ತಡಮಾಡುತ್ತಿರುವ ಕಾರಣ ವಿಚಾರಣೆಯು ತಡವಾಗುತ್ತಿದೆ ಎಂದು ಕೋರ್ಟ್ ಕಿಡಿಕಾರಿದೆ.

ನವದೆಹಲಿ(ಜ.14): ಕಲ್ಲಿದ್ದಲು ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ವಿಶೇಷ ಕೋರ್ಟ್ ನಿರ್ದೇಶಿಸಿದಂತೆ ಸಿಬಿಐ ಹಗರಣದ ಅಂತಿಮ ವರದಿಯನ್ನು ಸಲ್ಲಿಸಿದೆ.

ಸಾಕ್ಷಿದಾರ ಸುರೇಶ್ ಸಿಂಘಲ್ ಹೇಳಿಕೆಗಳ ಆಧಾರದಲ್ಲಿ ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ಸಹಾಯಕ ಸಚಿವ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಮರ್ಪಕವಾಗಿ ವರದಿಯನ್ನು ಸಲ್ಲಿಸಿಲ್ಲ ಎಂದು ಹಾಗೂ ಜ. 23ರೊಳಗೆ ಮತ್ತೆ ಸಲ್ಲಿಸಬೇಕೆಂದು ವಿಶೇಷ ನ್ಯಾ. ಭರತ್ ಪರಶರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಸಿಬಿಐ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳ ಪಟ್ಟಿ ಮತ್ತು ಅವರ ಹೇಳಿಕೆಗಳನ್ನು ರೆಕಾರ್ಡ್ ಮಾಡಿ ಸಲ್ಲಿಸಲಾಗಿದೆ. ಸಿಬಿಐ ವರದಿ ಸಲ್ಲಿಸಲು ತಡಮಾಡುತ್ತಿರುವ ಕಾರಣ ವಿಚಾರಣೆಯು ತಡವಾಗುತ್ತಿದೆ ಎಂದು ಕೋರ್ಟ್ ಕಿಡಿಕಾರಿದೆ.

ಕಲ್ಲಿದ್ದಲು ಹಗರಣ ಸಂಬಂಧ ಕಳೆದ ಏಪ್ರಿಲ್ 29ರಂದು ಪಟಿಯಾಲ ನ್ಯಾಯಾಲಯ ಜಿಂದಾಲ್, ಮಾಜಿ ಮುಖ್ಯಮಂತ್ರಿ ಮಧು ಖೋಡ, ಮಾಜಿ ಕಲ್ಲಿದ್ದಲು ರಾಜ್ಯಖಾತೆ ಸಚಿವ ನಾರಾಯಣ್ ರಾವ್ ಸೇರಿದಂತೆ 12 ಮಂದಿಯ ಮೇಲೆ ಚಾರ್ಜ್'ಶೀಟ್ ದಾಖಲಾಗಿತ್ತು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ
ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು