ಕಾವೇರಿ ನೀರಿನ ಹೋರಾಟ ಆರಂಭವಾಗಿದ್ದು ಎಲ್ಲಿಂದ..? ಇಲ್ಲಿದೆ ಕಾಲಾನುಕ್ರಮದ ಇತಿಹಾಸ

Published : Sep 06, 2016, 05:06 AM ISTUpdated : Apr 11, 2018, 01:01 PM IST
ಕಾವೇರಿ ನೀರಿನ ಹೋರಾಟ ಆರಂಭವಾಗಿದ್ದು ಎಲ್ಲಿಂದ..?  ಇಲ್ಲಿದೆ ಕಾಲಾನುಕ್ರಮದ ಇತಿಹಾಸ

ಸಾರಾಂಶ

ನೂರಾರು ವರ್ಷಗಳ ಹಿಂದೆಯೇ ಕಾವೇರಿ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ

ಬೆಂಗಳೂರು(ಸೆ.06): ಕಾವೇರಿ ನದಿ ನೀರಿನ ಹೋರಾಟ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳ ಹಿಂದೆಯೇ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ

- 1803ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೆರೆ ಮೂಲಕ ನೀರಾವರಿ

- ಕೆರೆ ಮೂಲಕ ನೀರಾವರಿಗೆ  ಮದ್ರಾಸ್ ಪ್ರೆಸಿಡೆನ್ಸಿ ಆಕ್ಷೇಪ

- 1892ರಲ್ಲಿ ಮೈಸೂರು- ಮದ್ರಾಸ್ ನಡುವೆ ಒಪ್ಪಂದ

- ನೀರಾವರಿ ಯೋಜನೆ ಕೈಗೊಳ್ಳಬೇಕಾದರೆ ಮದ್ರಾಸ್ ಆಡಳಿತದ ಅನುಮತಿ ಷರತ್ತು

- 1911- ಕೃಷ್ಣರಾಜಸಾಗರ ನಿರ್ಮಾಣಕ್ಕೆ ನಡೆದ ಶಿಲಾನ್ಯಾಸಕ್ಕೆ ಆಕ್ಷೇಪ

- 1924- ಹಲವು ಷರತ್ತುಗಳೊಂದಿಗೆ ಕೆಆರ್‌ಎಸ್ ನಿರ್ಮಾಣಕ್ಕೆ ಒಪ್ಪಂದ

- ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ

- ಅಣೆಕಟ್ಟು ನಿರ್ಮಿಸಬೇಕಾದರೆ ಮದ್ರಾಸ್ ಸರ್ಕಾರದ ಅನುಮತಿ ಷರತ್ತು

- 1931- ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಪೂರ್ಣ

- 1972- ಕೇಂದ್ರದಿಂದ ಕಾವೇರಿ ಸತ್ಯಶೋಧನಾ ಸಮಿತಿ ರಚನೆ. ವರದಿ ಸಲ್ಲಿಕೆ

- 1973- ತಮಿಳುನಾಡಿನಿಂದ ಸಮಿತಿ ವರದಿ ತಿರಸ್ಕಾರ

- 1990- ಸುಪ್ರೀಂಕೋರ್ಟ್ ಸೂಚನೆಯಂತೆ ಕಾವೇರಿ ನ್ಯಾಯ ಮಂಡಳಿ ರಚನೆ

- ಕೇಂದ್ರದಿಂದ ಚಿತ್ರತೋಷ್ ಮುಖರ್ಜಿ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿ ರಚನೆ

- 1991- ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು

- ತಮಿಳುನಾಡಿಗೆ 205 ಟಿಎಂಸಿ ನೀರು ಹರಿಸಲು ಆದೇಶ

- 1991- ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಸುಗ್ರೀವಾಜ್ಞೆ

- 1991- ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರ ಹೋರಾಟ

- 1995- ಬರ ನಡುವೆಯೂ ತಮಿಳುನಾಡಿಗೆ 11 ಟಎಂಸಿ ನೀರು ಬಿಡಲು ಆದೇಶ

- ತಮಿಳುನಾಡಿಗೆ ನೀರು ಹರಿಸಲು ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ

- ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದಿತ್ತು ಸಭೆ

- ಸಭೆಯಲ್ಲಿ ತಮಿಳುನಾಡಿಗೆ 6 ಟಿಎಂಸಿ ನೀರು ಬಿಡಲು ಸೂಚನೆ

- 1997ರಲ್ಲಿ ಕಾವೇರಿ ನದಿ ಪ್ರಾಧಿಕಾರ ರಚನೆ

- 2002- ಪ್ರಾಧಿಕಾರ ಸಭೆಯಲ್ಲಿ ನಿರ್ಧಾರವಾಗುವವರೆಗೂ ಬಿಡಲು ಸುಪ್ರೀಂಕೋರ್ಟ್ ಆದೇಶ

- ನಿತ್ಯ 1.25 ಟಿಎಂಸಿ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ

- ಬರ ಇದ್ದಿದ್ದರಿಂದ ರಾಜ್ಯದಲ್ಲಿ ತೀವ್ರ ಪ್ರತಿಭಟನೆ

- ಪ್ರಾಧಿಕಾರ ಸಭೆ ನಂತರ 9 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯದ ನಿರ್ಧಾರ

- 2002- ಮೈಸೂರು ಜಿಲ್ಲೆಯ ಬೀಚನಹಳ್ಳಿ ಗ್ರಾ. ಪಂ. ಸದಸ್ಯ ಗುರುಸ್ವಾಮಿ ಕಬಿನಿಗೆ ಹಾರಿ ಹುತಾತ್ಮ

- 2007- ನ್ಯಾಯಮಂಡಳಿ ಅಂತಿಮ ತೀರ್ಪು. ತಮಿಳುನಾಡಿಗೆ 419 ಟಿಎಂಸಿ

- ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆ

- ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಲು ಆದೇಶ

- 2012- ಕಾವೇರಿ ನದಿ ಪ್ರಾಧಿಕಾರದಿಂದ ನಿತ್ಯ 9 ಸಾವಿರ ಕ್ಯೂಸೆಕ್ ಬಿಡಲು ಸೂಚನೆ

- ಬರದ ಕಾರಣ ರಾಜ್ಯ ಸರ್ಕಾರದಿಂದ ನಕಾರ

- ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮೊರೆ

- ನ್ಯಾಯಾಲಯದಿಂದಲೂ ನೀರು ಬಿಡಲು ಆದೇಶ

- ಕೊನೆಗೂ ನ್ಯಾಯಾಲಯದ ಆದೇಶಕ್ಕೆ ಮಣಿದು ನೀರು ಬಿಡುಗಡೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?
ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ