ದಸರಾ ಗೊಂಬೆ ಮೂಲಕ ಕಾವೇರಿ ಹೋರಾಟ ಬಿಂಬಿಸಿದ ಕೃಪಾ ಗಿರೀಶ್ ಕುಟುಂಬ

Published : Oct 08, 2016, 03:36 AM ISTUpdated : Apr 11, 2018, 01:11 PM IST
ದಸರಾ ಗೊಂಬೆ ಮೂಲಕ ಕಾವೇರಿ ಹೋರಾಟ ಬಿಂಬಿಸಿದ ಕೃಪಾ ಗಿರೀಶ್ ಕುಟುಂಬ

ಸಾರಾಂಶ

ಕೆಆರ್‍ಎಸ್ ಡ್ಯಾಂ, ಮೆಟ್ಟೂರು ಜಲಾಶಯ, ನಾಡಿನ ರೈತರ ಸ್ಥಿತಿ, ನೀರಿಲ್ಲದೆ ಒಣಗಿರೋ ಕರ್ನಾಟಕದ ಬೆಳೆಗಳು, ಹಚ್ಚಹಸಿರಿನಿಂದ ಕಂಗೊಳಿಸ್ತಿರೋ ತಮಿಳುನಾಡಿನ ಬೆಳೆಗಳನ್ನೂ ಕಾಲ್ಪನಿಕವಾಗಿ ರಚಿಸಿದ್ದಾರೆ

ಚಿಕ್ಕಮಗಳೂರು(ಅ. 08): ದಸರಾ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾವಿರಾರು ಮನೆಗಳಲ್ಲಿ ದಸರಾ ಗೊಂಬೆಗಳನ್ನ ಪೂಜೆ ಮಾಡ್ತಾರೆ. ಆದ್ರೆ, ಚಿಕ್ಕಮಗಳೂರಿನ ಕೃಪಾಗಿರೀಶ್ ಕುಟುಂಬ ವಿಭಿನ್ನವಾಗಿ ದಸರಾ ಆಚರಿಸುತ್ತಿದ್ದಾರೆ. ದಸರಾ ಗೊಂಬೆಗಳ ಜೊತೆ ರಾಜ್ಯದ ಕಾವೇರಿಯ ಕಷ್ಟವನ್ನ ತೋರಿಸಿದ್ದಾರೆ.. ಕೆಆರ್‍ಎಸ್ ಡ್ಯಾಂ, ಮೆಟ್ಟೂರು ಜಲಾಶಯ, ನಾಡಿನ ರೈತರ ಸ್ಥಿತಿ, ನೀರಿಲ್ಲದೆ ಒಣಗಿರೋ ಕರ್ನಾಟಕದ ಬೆಳೆಗಳು, ಹಚ್ಚಹಸಿರಿನಿಂದ ಕಂಗೊಳಿಸ್ತಿರೋ ತಮಿಳುನಾಡಿನ ಬೆಳೆಗಳನ್ನೂ ಕಾಲ್ಪನಿಕವಾಗಿ ರಚಿಸಿದ್ದಾರೆ.. ಹಾಗೂ ಆದಷ್ಟು ಬೇಗ ಆ ಚಾಮುಂಡಿ ತಾಯಿ ರಾಜ್ಯಕ್ಕೆ ಬಂದಿರೋ ಕಂಟಕವನ್ನು ಶೀಘ್ರವೇ ಬಗೆಹರಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.

ಕೃಪಾ ಗಿರೀಶ್ ಅವರ ಮನೆಯಲ್ಲಿ ಇಡಲಾಗಿರುವ ಈ ದಸರಾ ಗೊಂಬೆಯ ಚಿತ್ರಣವು ಕಾಫಿ ನಾಡಿನಾದ್ಯಂತ ಸಾಕಷ್ಟು ಸುದ್ದಿ ಮಾಡ್ತಿದೆ. ಶಾಲಾ-ಕಾಲೇಜು ಮಕ್ಕಳು, ಶಿಕ್ಷಕರು ಬಂದು ನೋಡಿ ಹೋಗ್ತಿದ್ದಾರೆ. ಕೃಪಾಗಿರೀಶ್ ಕೂಡ ತಮಗಿರೋ ಜ್ಞಾನದಿಂದಲೇ ಬರೋ ಮಕ್ಕಳಿಗೆ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತಿದ್ದಾರೆ.

ನಿಜಕ್ಕೂ ಇವ್ರಿಗೆ ಈ ನಾಡು, ನೆಲ, ಜಲದ ಮೇಲಿರೋ ಪ್ರೀತಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಇವ್ರ ಈ ವಿಭಿನ್ನ ಪ್ರಾರ್ಥನೆ ಆ ಚಾಮುಂಡಿಗೆ ಮುಟ್ಟಿ ರಾಜ್ಯಕ್ಕೆ ಒಳ್ಳೆದಾಗ್ಲಿ ಅನ್ನೋದು ಎಲ್ಲರ ಹಾರೈಕೆ.

- ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ