CRPF ವಾಹನದ ಬಳಿಯೇ ಕಾರು ಸ್ಫೋಟ: ‘ಅಪಘಾತ’ದ ಶಂಕೆ!

Published : Mar 30, 2019, 01:05 PM ISTUpdated : Mar 30, 2019, 01:18 PM IST
CRPF ವಾಹನದ ಬಳಿಯೇ ಕಾರು ಸ್ಫೋಟ: ‘ಅಪಘಾತ’ದ ಶಂಕೆ!

ಸಾರಾಂಶ

ಕಣಿವೆಯಲ್ಲಿ CRPF ವಾಹನದ ಬಳಿ ಕಾರು ಸ್ಫೋಟ| CRPF ವಾಹನ ಸಾಗುವ ದಾರಿಯಲ್ಲೇ ಕಾರು ಸ್ಫೋಟ| ಭಯೋತ್ಪಾದಕ ದಾಳಿಯ ಶಂಕೆ| ಸಿಲಿಂಡರ್ ಬ್ಲಾಸ್ಟ್ ಆದ ಪರಿಣಾಮ ಸ್ಫೋಟ| ಅಪಘಾತವಾಗುತ್ತಿದ್ದಂತೇ ಸ್ಥಳದಿಂದ ಕಾಲ್ಕಿತ್ತ ಕಾರು ಚಾಲಕ| ತನಿಖೆ ಚುರುಕುಗೊಳಿಸಿದ ಪೊಲೀಸರು|

ಶ್ರೀನಗರ(ಮಾ.30): ಪುಲ್ವಾಮಾ ದಾಳಿ ಮಾಸುವ ಮುನ್ನವೇ ಕಣಿವೆಯಲ್ಲಿ ಮತ್ತೊಂದು ದರ್ಘಟನೆ ಸಂಭವಿಸಿದ್ದು, CRPF ವಾಹನದ ಸಮೀಪವೇ ಕಾರೊಂದು ಬ್ಲಾಸ್ಟ್ ಆಗಿದೆ.

CRPF ವಾಹನ ಸಾಗುತ್ತಿದ್ದ ದಾರಿಯಲ್ಲೇ ಕೆಲವೇ ಅನತಿಯಲ್ಲಿ ಕಾರೊಂದು ಬ್ಲಾಸ್ಟ್ ಆಗಿದೆ. ಆದರೆ ಇದೊಂದು ಭಯೋತ್ಪಾದಕ ದಾಳಿಯಾಗಿರದೇ ಕಾರಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಂ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಜಮ್ಮು-ಶ್ರೀನಗರ ಹೆದ್ದಾರಿ ಬನಿಹಲ್ ನಲ್ಲಿ CRPF ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ ಎನ್ನಲಾಗಿದೆ. ವಾಹನಕ್ಕೆ ಡಿಕ್ಕಿ ಹೊಡೆದ ಕೂಡಲೇ ಕಾರಿನ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

"

ಸ್ಫೋಟದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಕಾರು ಚಾಲಕನ ಬಂಧನಕ್ಕೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದೆ.

CRPF ವಾಹನಕ್ಕೆ ಡಿಕ್ಕಿ ಹೊಡೆದಿರುವ ಕಾರಣದಿಂದ ಭಯೋತ್ಪಾದಕ ದಾಳಿಯ ಅನುಮಾನ ಮೂಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ